WhatsApp Group Join Now
Telegram Group Join Now

FDA-2019 samanya kannada Question Paper

FDA-2019 Paper-2 General KANNADA Questions with answers

ದಿನಾಂಕ 09.06.2019 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪ್ರಥಮ ದರ್ಜೆ ಸಹಾಯಕ [ಎಫ್.ಡಿ.ಎ.] ಸಾಮಾನ್ಯ ಕನ್ನಡ ಪತ್ರಿಕೆ – II (ವಿಷಯ ಸಂಕೇತ: 367)ರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.

ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.

ಉದಾಹರಣೆ:
ಮೀನ್ ಎಂದರೆ
 (1)ಹೊಳೆಯುವ
 (2)ಮೀಯು
 (3)ಮೇಯು
 (4)ಆಕಾಶ
ಇಲ್ಲಿ ‘‘ಹೊಳೆಯುವ’’ ಎಂಬುದು ‘‘ಮೀನ್’ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು.
1.ತಸ್ಕರ ಎಂದರೆ
 (1)ಭಾಸ್ಕರ
 (2)ಕಳ್ಳ
 (3)ದಿವಾಕರ
 (4)ತಕಲಿ
ಸರಿ ಉತ್ತರ

(2) ಕಳ್ಳ


2.ಹಳು ಎಂದರೆ
 (1)ಅಳು
 (2)ರೋದಿಸು
 (3)ಕಾಡು
 (4)ಆಲಾಪ
ಸರಿ ಉತ್ತರ

(3) ಕಾಡು


3.ಕೋಮಣ, ಇದರ ಸಮಾನಾರ್ಥಕ ಪದಗಳು
 (1)ತೋರಣ, ಕಲ್ಯಾಣ
 (2)ಲಂಗೋಟಿ, ಕೌಪೀನ
 (3)ಕೌಪೀನ, ತೋರಣ
 (4)ಕಲ್ಯಾಣ, ಲಂಗೋಟಿ
ಸರಿ ಉತ್ತರ

(2) ಲಂಗೋಟಿ, ಕೌಪೀನ


4.ದೂರ್ವೆ ಇದರ ಸಮಾನಾರ್ಥಕ ಪದ
 (1)ಹರಟೆ
 (2)ಭಯ
 (3)ಹಸು
 (4)ಗರಿಕೆ
ಸರಿ ಉತ್ತರ

(4) ಗರಿಕೆ


5.ದ್ವಿರದ ಎಂದರೆ
 (1)ಆನೆ
 (2)ಕರಡಿ
 (3)ನರಿ
 (4)ಜಿಂಕೆ
ಸರಿ ಉತ್ತರ

(1) ಆನೆ


6.ಪಂಜ ಎಂದರೆ
 (1)ಪಂಜು
 (2)ಪಂಚೆ
 (3)ಹುಲಿಯ ಅಂಗಾಲು
 (4)ಪಂದ್ಯ
ಸರಿ ಉತ್ತರ

(3) ಹುಲಿಯ ಅಂಗಾಲು


7.ಪಲ್ವಲ ಎಂದರೆ
 (1)ಪಲ್ಲವ
 (2)ಪಲ್ಲಟ
 (3)ಕೊಳ
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(3) ಕೊಳ


8.ಗೋಸಾಯಿ ಇದರ ಸಮಾನಾರ್ಥಕ ಪದ
 (1)ಗೋಶಾಲೆ
 (2)ಸನ್ಯಾಸಿ
 (3)ಗೋರಕ್ಷಕ
 (4)ಸೇವಕಿ
ಸರಿ ಉತ್ತರ

(2) ಸನ್ಯಾಸಿ


9.ಪಾಷಾಣ ಎಂಬುದರ ಸಮಾನಾರ್ಥ
 (1)ಹಗ್ಗ
 (2)ಪಾಯಸ
 (3)ಹರಿಶಿಣ
 (4)ಕಲ್ಲು
ಸರಿ ಉತ್ತರ

(4) ಕಲ್ಲು


ಸೂಚನೆಗಳು : ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆ ಸಂಖ್ಯೆ 10 – 17) ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಿಂದ ಗುರ್ತಿಸಿ.

ಉದಾಹರಣೆ :
ತೆಂಕಣ
 (1)ಮೂಡಣ
 (2)ಬಡಗಣ
 (3)ಪಡುವಣ
 (4)ತೆಗಣ
ಇಲ್ಲಿ ‘‘ತೆಂಕಣ’’ ಪದಕ್ಕೆ ವಿರುದ್ಧಾರ್ಥಕ ರೂಪ ‘‘ಬಡಗಣ’’ ಎಂಬುದು (2) ನ್ನು ಗುರುತಿಸಬಹುದು.
10.ಸುವಿಖ್ಯಾತಿ
 (1)ಸುಪ್ರಸಿದ್ದ
 (2)ಕುವಿಖ್ಯಾತಿ
 (3)ಅಪ್ರಸಿದ್ಧ
 (4)ಪ್ರಸಿದ್ಧ
ಸರಿ ಉತ್ತರ

(2) ಕುವಿಖ್ಯಾತಿ


11.ಆಸ್ತಿಕ
 (1)ನಾಸ್ತಿಕ
 (2)ನಾಸಿಕ
 (3)ಧಾರ್ಮಿಕ
 (4)ಸಿರಿವಂತ
ಸರಿ ಉತ್ತರ

(1) ನಾಸ್ತಿಕ


12.ಜಾತ
 (1)ವಿಜಾತ
 (2)ಹುಟ್ಟು
 (3)ಅಜಾತ
 (4)ಸಾವು
ಸರಿ ಉತ್ತರ

(3) ಅಜಾತ


13.ಮತ್ಸರ
 (1)ಹೊಟ್ಟೆಕಿಚ್ಚು
 (2)ಅಮತ್ಸರ
 (3)ದುರ್ಮತ್ಸರ
 (4)ನಿರ್ಮತ್ಸರ
ಸರಿ ಉತ್ತರ

(4) ನಿರ್ಮತ್ಸರ


14.ಸಂಧ್ಯಾಕಾಲ
 (1)ಮಧ್ಯಾಹ್ನ
 (2)ಪ್ರಾತಃಕಾಲ
 (3)ರಾತ್ರಿಕಾಲ
 (4)ಒಳ್ಳೆಯ ಕಾಲ
ಸರಿ ಉತ್ತರ

(2) ಪ್ರಾತಃಕಾಲ


15.ಕೃತಜ್ಞ
 (1)ಅಕೃತಜ್ಞ
 (2)ಸರ್ವಜ್ಞ
 (3)ಕೃತಘ್ನ
 (4)ಉಪಕಾರಿ
ಸರಿ ಉತ್ತರ

(3) ಕೃತಘ್ನ


16.ದುರ್ಬಲ
 (1)ಸಬಲ
 (2)ಅಬಲ
 (3)ಬಲ
 (4)ನಿರ್ಬಲ
ಸರಿ ಉತ್ತರ

(1) ಸಬಲ


17.ಮಾನವ
 (1)ನರ
 (2)ಅಮಾನವ
 (3)ಕ್ರೂರಿ
 (4)ದಾನವ
ಸರಿ ಉತ್ತರ

(4) ದಾನವ


ಸೂಚನೆಗಳು : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆ ಸಂಖ್ಯೆ 18 – 22) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ.

ಉದಾಹರಣೆ :
‘‘ಬೆಣ್ಣೆ ಹಚ್ಚು’’
 (1)ರೊಟ್ಟಿಗೆ ಬೆಣ್ಣೆ ಹಚ್ಚು
 (2)ಮೈಯುಜ್ಜುವುದು
 (3)ಹೊಗಳುವುದು
 (4)ಸೇವೆ ಮಾಡುವುದು
ಇಲ್ಲಿ ‘‘ಹೊಗಳುವುದು’’. ಸರಿಯಾದ ಅರ್ಥ ಆದುದರಿಂದ (3) ನ್ನು ಗುರುತಿಸಬೇಕು.
18.‘ಗಾಳಿಗೆ ತೂರು’
 (1)ರಾಶಿ ಮಾಡು
 (2)ಕೈ ಬಿಡು
 (3)ತಿರಸ್ಕರಿಸು
 (4)ಹೊರಹಾಕು
ಸರಿ ಉತ್ತರ

(3) ತಿರಸ್ಕರಿಸು


19.‘ಕೆಂಡಕಾರು’
 (1)ಮೋಸ ಮಾಡು
 (2)ಹೊಟ್ಟೆಕಿಚ್ಚು ಪಡು
 (3)ಬೆಂಕಿಗೆ ಹಾಕು
 (4)ಸಿಟ್ಟಾಗು
ಸರಿ ಉತ್ತರ

(4) ಸಿಟ್ಟಾಗು


20.ಮೂಗು ದಾರ ತೊಡಿಸು
 (1)ವಿರೂಪಗೊಳಿಸು
 (2)ಮುದ್ದುಮಾಡು
 (3)ಹತೋಟಿಯಲ್ಲಿ ಇಡು
 (4)ಮತ್ತೊಬ್ಬರ ರಕ್ಷಣೆಯಲ್ಲಿರು
ಸರಿ ಉತ್ತರ

(3) ಹತೋಟಿಯಲ್ಲಿ ಇಡು


21.‘‘ಏತಿ ಎಂದರೆ ಪ್ರೇತಿಯನ್ನು’’ ನುಡಿಗಟ್ಟಿನ ಅರ್ಥ
 (1)ಹೇಳಿದ್ದಕ್ಕೆ ವಿರುದ್ಧವಾಗಿ ಹೇಳು
 (2)ಕೈಬಿಡು
 (3)ನೆಪ ಮಾತ್ರಕ್ಕೆ ಊಟ ಮಾಡು
 (4)ಪ್ರಸಿದ್ದವಾಗಿರುವ
ಸರಿ ಉತ್ತರ

(1) ಹೇಳಿದ್ದಕ್ಕೆ ವಿರುದ್ಧವಾಗಿ ಹೇಳು


22.ಸೆರಗಿನಲ್ಲಿ ಗಂಟು ಹಾಕಿಕೊಳ್ಳು – ನುಡಿಗಟ್ಟಿನ ಅರ್ಥ
 (1)ಜ್ಞಾಪಕದಲ್ಲಿಟ್ಟುಕೊಳ್ಳುವ
 (2)ಪ್ರೀತಿಯಿಂದ ಇರು
 (3)ಯಜಮಾನಿಕೆ ನಡೆಸು
 (4)ಸ್ವಾವಲಂಬಿಯಾಗುವಂತೆ
ಸರಿ ಉತ್ತರ

(1) ಜ್ಞಾಪಕದಲ್ಲಿಟ್ಟುಕೊಳ್ಳುವ


ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 23 – 27) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಇಂಗ್ಲೀಷ್ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.

ಉದಾಹರಣೆ:
ಹೆದ್ದಾರಿಯಲ್ಲಿ ಕಾರೊಂದು ಆಕ್ಸಿಡೆಂಟ್ ಗೊಳಗಾಯಿತು.
 (1)ಪ್ರಮಾದ
 (2)ಅಪಘಾತ
 (3)ವಿಪತ್ತು
 (4)ಅಕಸ್ಮಾತ್
ಇಲ್ಲಿ ‘‘ಅಪಘಾತ’’ ಎಂಬುದು ಸೂಕ್ತ ರೂಪವಾದುದರಿಂದ (2) ನ್ನು ಗುರುತಿಸಬೇಕು.
23.ಇತ್ತಿತ್ತಲಾಗಿ ಸೋಷಿಯಲ್ ಮೀಡಿಯಾಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಲಿವೆ.
 (1)ಸಾಮಾಜಿಕ ಮಾಧ್ಯಮಗಳು
 (2)ಸಮಾಜ ಸೇವಾ ಸಂಸ್ಥೆಗಳು
 (3)ಸಾಮಾಜಿಕ ಪತ್ರಿಕೆಗಳು
 (4)ಸಾಮಾಜಿಕ ಸಂಘಟನೆಗಳು
ಸರಿ ಉತ್ತರ

(1) ಸಾಮಾಜಿಕ ಮಾಧ್ಯಮಗಳು


24.ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಗೆ ಆಗಮಿಸಿದ ಅತಿಥಿಗಳು ತುಂಬ ‘ಅಥೆಂಟಿಕ್’ ಆಗಿ ಮಾತನಾಡಿದರು.
 (1)ಅಧಿಕೃತವಾಗಿ
 (2)ಸರಳವಾಗಿ
 (3)ಸುಲಲಿತವಾಗಿ
 (4)ಚೆನ್ನಾಗಿ
ಸರಿ ಉತ್ತರ

(1) ಅಧಿಕೃತವಾ


25.ಮುಖ್ಯಮಂತ್ರಿಗಳು ಬರಗಾಲ ಕಾಮಗಾರಿಯನ್ನು ಕುರಿತು ಸೆಕ್ರೆಟರಿಯೆಟ್ ಸ್ಟಾಫ್ ನ್ನು ಉದ್ದೇಶಿಸಿ ಮಾತನಾಡಿದರು.
 (1)ರಹಸ್ಯ ಕಾರ್ಯದರ್ಶಿ ಸಿಬ್ಬಂದಿ
 (2)ಸಚಿವಾಲಯದ ಸಿಬ್ಬಂದಿ
 (3)ಆಪ್ತ ಸಿಬ್ಬಂದಿ
 (4)ಕಾರ್ಯಕ್ರಮ ಕಾರ್ಯದರ್ಶಿ ಸಿಬ್ಬಂದಿ
ಸರಿ ಉತ್ತರ

(2) ಸಚಿವಾಲಯದ ಸಿಬ್ಬಂದಿ


26.ಹೊಸದಾದ ಕನ್ನಡ ಚಿತ್ರದ ರಿವ್ಯೂ ನೋಡಿದೆ ಚೆನ್ನಾಗಿದೆ.
 (1)ಅನಿಸಿಕೆ
 (2)ವಿಮರ್ಶೆ
 (3)ಟೀಕೆ
 (4)ಹೊರನೋಟ
ಸರಿ ಉತ್ತರ

(2) ವಿಮರ್ಶೆ


27.ವಿಷಯ ತಜ್ಞರ ಸಮಿತಿ ಸೇರಿ ಟೆಕ್ಸ್ಟ್ ಬುಕ್ ಸಿದ್ದಪಡಿಸಿದೆ.
 (1)ಪರೀಕ್ಷಾ ಪುಸ್ತಕ
 (2)ಪಠ್ಯ ಪುಸ್ತಕ
 (3)ಪರಿಚಯ ಪುಸ್ತಕ
 (4)ಪಠ್ಯ ಕ್ರಮ
ಸರಿ ಉತ್ತರ

(2) ಪಠ್ಯ ಪುಸ್ತಕ


ಸೂಚನೆಗಳು: ಈ ಕೆಳಗೆ ಕೊಟ್ಟ ಶಬ್ದಗಳಲ್ಲಿ (ಪ್ರಶ್ನೆ ಸಂಖ್ಯೆ 28 – 32) ಒಂದು ಪದ ಉಳಿದವುಗಳ ಗುಂಪಿಗೆ ಸೇರುವುದಿಲ್ಲ. ಅಂತಹ ಪದ ಗುರುತಿಸಿ.

ಉದಾಹರಣೆ :
 (1)ಹುಡುಗಿ
 (2)ನವಿಲು
 (3)ಗಿಳಿ
 (4)ಕಿತ್ತಳೆ
ಇಲ್ಲಿ ‘‘ಕಿತ್ತಳೆ’’ ಇತರ ಪದಗಳ ಜಾತಿಗೆ ಸೇರುವುದಿಲ್ಲ ಆದುದರಿಂದ (4) ನ್ನು ಗುರುತಿಸಬೇಕು.
28.(1)ಸೂರ್ಯ
 (2)ಶಶಿ
 (3)ಇನ
 (4)ಭಾಸ್ಕರ
ಸರಿ ಉತ್ತರ

(2) ಶಶಿ


29.(1)ಶ್ರೀರಾಮಾಯಣ ದರ್ಶನಂ
 (2)ಮೂಕಜ್ಜಿಯ ಕನಸುಗಳು
 (3)ಭಾರತ ಸಿಂಧುರಶ್ಮಿ
 (4)ಕವಿರಾಜಮಾರ್ಗ
ಸರಿ ಉತ್ತರ

(4) ಕವಿರಾಜಮಾರ್ಗ


30.(1)ಗೊಟ್ಟಿ
 (2)ಸನ್ನೆ
 (3)ಬೇಸಿಗೆ
 (4)ಕುಠಾರ
ಸರಿ ಉತ್ತರ

(4) ಕುಠಾರ


31.(1)ನಾನು
 (2)ನೀನು
 (3)ಅವನು
 (4)ಯಾರು
ಸರಿ ಉತ್ತರ

(4) ಯಾರು


32.(1)ಕಿಲಕಿಲ
 (2)ಜುಳುಜುಳು
 (3)ಅಬ್ಬಬ್ಬಾ
 (4)ರಪರಪ
ಸರಿ ಉತ್ತರ

(3) ಅಬ್ಬಬ್ಬಾ


ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ. ತಪಿಲ್ಲದಿದ್ದರೆ ‘‘ಸುಧಾರಣೆ ಬೇಕಿಲ್ಲ’’ ಎಂಬ (4) ನ್ನು ಗುರುತಿಸಿ (ಪ್ರಶ್ನೆ ಸಂಖ್ಯೆ 33 – 38).

ಉದಾಹರಣೆ :
ಲೋಕಾಯುಕ್ತ ಲಂಚ ಹಗುರಣಕ್ಕೆ ಸಂಬಂಧಿಸಿ ಎಂಟು ಜನರ ಬಂಧನ
 (1)ಹಾಗರಣ
 (2)ಹಗರಣ
 (3)ಹಗರನ
 (4)ತಪ್ಪಿಲ್ಲ
ಇಲ್ಲಿ ಗೆರೆ ಎಳೆದ ‘‘ಹಗುರಣ’’ ತಪ್ಪಾಗಿದ್ದು ಅದರ ಸರಿಯಾದ ರೂಪವು ‘‘ಹಗರಣ’’ ಎಂದಾಗಿದೆ ಅದರಿಂದ (2) ನ್ನು ಗುರುತಿಸಬೇಕು.
33.ನವೆಂಬರ್ ಒಂದರಂದು ಕರ್ನಾಟಕ ರಾಜೊಸ್ತವ ಕಾರ್ಯಕ್ರಮ ನಡೆಯುತ್ತದೆ.
 (1)ರಾಜ್ಯೋತ್ಸವ
 (2)ರಾಜೋತ್ಸವ
 (3)ರಾಜ್ಯೋಸ್ತವ
 (4)ತಪ್ಪಿಲ್ಲ
ಸರಿ ಉತ್ತರ

(1) ರಾಜ್ಯೋತ್ಸವ


34.ಶ್ರೀಯವರಿಗೆ ಗ್ರೀಕ್ ದುರಂತ ನಾಟಕಗಳ ಛಾಯೆ ಎದ್ದು ಕಂಡಿದೆ.
 (1)ದುರಂಥ
 (2)ದುರಂತಾ
 (3)ಧುರಂತ
 (4)ತಪ್ಪಿಲ್ಲ
ಸರಿ ಉತ್ತರ

(4) ತಪ್ಪಿಲ್ಲ


35.ಬಾದಾಮಿ ಚಾಲುಕ್ಯರ ಏಳಿಗೆಯಿಂದ ಕರ್ನಾಟಕ ಇತಿಹಾಸಕ್ಕೆ ಒಂದು ನಿರ್ದಿಷ್ಟ ಸ್ವರೂಪ ಬಂದಿದೆ.
 (1)ಏಳೀಗೆ
 (2)ಹೇಳಿಗೆ
 (3)ಹೆಳಿಗೆ
 (4)ತಪ್ಪಿಲ್ಲ
ಸರಿ ಉತ್ತರ

(4) ತಪ್ಪಿಲ್ಲ


36.ವಿಧ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಲು ನಿರ್ಧರಿಸಲಾಗಿದೆ.
 (1)ವಿದ್ಯಾರ್ಥಿ ಸಂಘ
 (2)ವಿದ್ಯರ್ಥಿ ಸಂಘ
 (3)ವಿದ್ಯಾರ್ತಿ ಸಂಘ
 (4)ತಪ್ಪಿಲ್ಲ
ಸರಿ ಉತ್ತರ

(4) ತಪ್ಪಿಲ್ಲ


37.ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಸುವಂತಹ ಆಡಳಿತ ಪ್ರಜಾಪ್ರಭುತ್ವ.
 (1)ಪ್ರಜೆಪ್ರಭುತ್ವ
 (2)ಪ್ರಜಪ್ರಭುತ್ವ
 (3)ಪ್ರಜಾಪ್ರಭತ್ವ
 (4)ತಪ್ಪಿಲ್ಲ
ಸರಿ ಉತ್ತರ

(4) ತಪ್ಪಿಲ್ಲ


38.ಬುದ್ಧನ ಅನುಯಾಯಿಗಳು ಬೌದ್ಧ ಧರ್ಮವನ್ನು ಪ್ರಸಾರ ಮಾಡಿದರು.
 (1)ಅನುಯಾಹಿಗಳು
 (2)ಅನುಹಾಯಿಗಳು
 (3)ಅನುವಾಯಿಗಳು
 (4)ತಪ್ಪಿಲ್ಲ
ಸರಿ ಉತ್ತರ

(4) ತಪ್ಪಿಲ್ಲ


ಸೂಚನೆಗಳು: ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರ ಗುರುತಿಸಿ ಅಥವಾ ಪ್ರಶ್ನೆಗೆ ಸರಿಯಾದ ಉತ್ತರ ಆಯ್ಕೆ ಮಾಡಿ. (ಪ್ರಶ್ನೆ ಸಂಖ್ಯೆ 39 – 65)

ಉದಾಹರಣೆ :
ನಡೆಯುತ್ತಿದೆ ಎಂಬುದು ………….. ದ ಪದ.
 (1)ಭೂತಕಾಲ
 (2)ವರ್ತಮಾನ ಕಾಲ
 (3)ಭವಿಷ್ಯತ್ ಕಾಲ
 (4)ಹಿಂದಿನ ಕಾಲ
ಇಲ್ಲಿ ‘‘ವರ್ತಮಾನ ಕಾಲ’’ ಎಂಬುದು ಸರಿಯಾದ ಉತ್ತರ ಅದುದರಿಂದ (2) ನ್ನು ಗುರುತಿಸಬೇಕು.
39.‘ಜ್’ ಈ ಅಕ್ಷರದ ಉತ್ಪತ್ತಿ ಸ್ಥಾನ ಇದಾಗಿದೆ.
 (1)ಕಂಠ್ಯ
 (2)ತಾಲವ್ಯ
 (3)ಮೂರ್ದನ್ಯ
 (4)ಅನುನಾಸಿಕ
ಸರಿ ಉತ್ತರ

(2) ತಾಲವ್ಯ


40.‘ರಾಷ್ಟ್ರ’ ಈ ಪದದಲ್ಲಿ ಯಾವ ಜಾತಿಯ ಸಂಯುಕ್ತಾಕ್ಷರಗಳಿವೆ?
 (1)ಪರಜಾತೀಯ
 (2)ಸಜಾತೀಯ
 (3)ವಿಜಾತೀಯ
 (4)ಸ್ವಜಾತೀಯ
ಸರಿ ಉತ್ತರ

(3) ವಿಜಾತೀಯ


41.ದೇವರು ಒಳ್ಳೆಯದನ್ನು ಮಾಡಲಿ ಎನ್ನುವದು ………….. ವಾಕ್ಯ.
 (1)ಸಂಭಾವನಾರ್ಥಕ
 (2)ಕ್ರಿಯಾರ್ಥಕ
 (3)ವಿಧ್ಯರ್ಥಕ
 (4)ನಿಷೇಧಾರ್ಥಕ
ಸರಿ ಉತ್ತರ

(3) ವಿಧ್ಯರ್ಥಕ


42.‘ಕನ್ನಡಿಗ’ ಎಂಬುದು …………..ದ ಉದಾಹರಣೆ.
 (1)ಕೃದಂತಾವ್ಯಯ
 (2)ತದ್ಧಿತನಾಮ
 (3)ಭಾವಕೃದಂತ
 (4)ಭೂತಕೃದಂತ
ಸರಿ ಉತ್ತರ

(2) ತದ್ಧಿತನಾಮ


43.ವಾಚಿಸು ಎಂದರೆ
 (1)ಮಾತನಾಡು
 (2)ಓದು
 (3)ಅಧ್ಯಯನ ಮಾಡು
 (4)ಪಿಸುಗುಟ್ಟು
ಸರಿ ಉತ್ತರ

(2) ಓದು


44.‘ಪಂಡಿತ’ ಎಂಬುದು ಈ ಕೆಳಗಿನ ಯಾವ ನಾಮಪದಕ್ಕೆ ಉದಾಹರಣೆಯಾಗಿದೆ ?
 (1)ರೂಢನಾಮ
 (2)ಅಂಕಿತನಾಮ
 (3)ಸರ್ವನಾಮ
 (4)ಅನ್ವರ್ಥಕನಾಮ
ಸರಿ ಉತ್ತರ

(4) ಅನ್ವರ್ಥಕನಾಮ


45.ಹಣದಾಸೆಗೆ ಎಂಬುದು ಯಾವ ಸಂಧಿ ?
 (1)ಸವರ್ಣದೀರ್ಘ ಸಂಧಿ
 (2)ಆದೇಶ ಸಂಧಿ
 (3)ಲೋಪ ಸಂಧಿ
 (4)ಜಸ್ತ ್ವ ಸಂಧಿ
ಸರಿ ಉತ್ತರ

(3) ಲೋಪ ಸಂಧಿ


46.ಸಜ್ಜನ ಎಂಬುದು ಯಾವ ಲಿಂಗ ?
 (1)ನಪುಂಸಕ ಲಿಂಗ
 (2)ಪುಲ್ಲಿಂಗ
 (3)ನಿತ್ಯ ನಪುಂಸಕ ಲಿಂಗ
 (4)ಸಾಮಾನ್ಯ ಲಿಂಗ
ಸರಿ ಉತ್ತರ

(2) ಪುಲ್ಲಿಂಗ


47.ಕನ್ನಡ ವ್ಯಾಕರಣವನ್ನು ಸಂಸ್ಕೃತದಲ್ಲಿ ಬರೆದ ಪಂಡಿತರು ಯಾರು?
 (1)ಒಂದನೆಯ ನಾಗವರ್ಮ
 (2)ಎರಡನೇ ನಾಗವರ್ಮ
 (3)ಕೇಶಿರಾಜ
 (4)ಒಂದನೇ ಗುಣವರ್ಮ
ಸರಿ ಉತ್ತರ

(2) ಎರಡನೇ ನಾಗವರ್ಮ


48.ಪ್ರಶ್ನಾರ್ಥಕ ಮತ್ತು ಆತ್ಮಾರ್ಥಕ ಸರ್ವನಾಮಗಳು ಯಾವುವು ?
 (1)ತಾನ್, ಯಾ
 (2)ಯಾ, ತಾನ್
 (3)ಆನ್ ಏನ್
 (4)ಏನ್ ಆನ್
ಸರಿ ಉತ್ತರ

(2) ಯಾ, ತಾನ್


49.ಕನ್ನಡದ ಯಾವ ಶಬ್ದಗಳಲ್ಲಿ ಪ್ರತ್ಯಯಗಳು ಲಿಂಗ ವಿವಕ್ಷೆ ಮಾಡುತ್ತವೆ?
 (1)ಮಹತ್
 (2)ಆ ಮಹತ್
 (3)ಮೇಲಿನ ಎರಡು
 (4)ಯಾವುದು ಅಲ್ಲ
ಸರಿ ಉತ್ತರ

(3) ಮೇಲಿನ ಎರಡು


50.ಬಾಳುವವನಿಗೆ ಒಂದು ಮಾತು .
 (1)ಮಡಿಕೆಗೆ ಒಂದು ಹೊಡೆತ
 (2)ದೊಣ್ಣೆಗೆ ಒಂದು ನಿಮಿಷ
 (3)ಬಾಳೆ ಗಿಡಕ್ಕೆ ಒಂದು ಗೊನೆ
 (4)ಯಾವುದು ಅಲ್ಲ
ಸರಿ ಉತ್ತರ

(3) ಬಾಳೆ ಗಿಡಕ್ಕೆ ಒಂದು ಗೊನೆ


51.ದೇಶ್ಯ ಪದವನ್ನು ಗುರುತಿಸಿ
 (1)ನಕಲಿ
 (2)ಕಾಗದ
 (3)ಮಹತ್
 (4)ನೇಸರ
ಸರಿ ಉತ್ತರ

(4) ನೇಸರ


52.ಕೂಸು ಮಲಗಿತು ಎಂಬುದು …………..
 (1)ಅಕರ್ಮಕ ಕ್ರಿಯಾಪದ
 (2)ಸಕರ್ಮಕ ಕ್ರಿಯಾಪದ
 (3)ಕಾಲಸೂಚಕ ಪ್ರತ್ಯಯ
 (4)ಅಖ್ಯಾತ ಪ್ರತ್ಯಯ
ಸರಿ ಉತ್ತರ

(1) ಅಕರ್ಮಕ ಕ್ರಿಯಾಪದ


53.ತಾರನು ಎನ್ನುವುದು …………..
 (1)ವರ್ತಮಾನ ಕಾಲದ ಕ್ರಿಯಾಪದ
 (2)ಸಂಭಾವಾರ್ಥಕ ಕ್ರಿಯಾಪದ
 (3)ನಿಷೇಧಾರ್ಥಕ ಕ್ರಿಯಾಪದ
 (4)ಭವಿಷತ್ ಕಾಲದ ಕ್ರಿಯಾಪದ
ಸರಿ ಉತ್ತರ

(3) ನಿಷೇಧಾರ್ಥಕ ಕ್ರಿಯಾಪದ


54.ಕರ್ಮಿಣಿ ಪ್ರಯೋಗದಲ್ಲಿ ಕರ್ತೃ ಪದವು ಪಡೆದುಕೊಳ್ಳುವ ವಿಭಕ್ತಿ ಪ್ರತ್ಯಯ
 (1)ಪ್ರಥಮಾ
 (2)ದ್ವಿತೀಯಾ
 (3)ತೃತೀಯಾ
 (4)ಸಪ್ತಮೀ
ಸರಿ ಉತ್ತರ

(3) ತೃತೀಯಾ


55.ಕೊಳಕು ಪದದ ವಿರುದ್ಧ ರೂಪ
 (1)ಸ್ವಚ್ಛ
 (2)ಕ್ಲೀನು
 (3)ಮಡಿ
 (4)ಶುದ್ಧ
ಸರಿ ಉತ್ತರ

(1) ಸ್ವಚ್ಛ


56.ನೀಲಗಾರರು ಈ ಪರಂಪರೆಗೆ ಸೇರಿದವರು
 (1)ಜಾನಪದ
 (2)ಶರಣ ಪರಂಪರೆ
 (3)ಮಂಟೇಸ್ವಾಮಿ
 (4)ಯಕ್ಷಗಾನ
ಸರಿ ಉತ್ತರ

(3) ಮಂಟೇಸ್ವಾಮಿ


57.ಕೆರೆಗೆ ಹಾರ – ಇದು
 (1)ಜನಪದ ಕಥನಗೀತೆ
 (2)ಜನಪದ ಗೀತೆ
 (3)ಜನಪದ ಮಹಾಕಾವ್ಯ
 (4)ಜನಪದ
ಸರಿ ಉತ್ತರ

(1) ಜನಪದ ಕಥನಗೀತೆ


58.ಪಡೆದೀಯೈದು ಪದವನ್ನು ಬಿಡಿಸಿದಾಗ
 (1)ಪಡೆದು + ಈಯೈದು
 (2)ಪಡೆದೀ + ಐದು
 (3)ಪಡೆದು + ಈ + ಐದು
 (4)ಪಡೆದು + ಇ + ಐದು
ಸರಿ ಉತ್ತರ

(3) ಪಡೆದು + ಈ + ಐದು


59.‘ಭಾಷಾ ವಿಜ್ಞಾನದ ಮೂಲ ತತ್ವಗಳು’ ಕೃತಿಯನ್ನು ರಚಿಸಿದವರು …………..
 (1)ಕುಶಾಲಪ್ಪಗೌಡ
 (2)ರಾಜೇಶ್ವರಿ. ಎಂ.
 (3)ಡಾ. ಸೌದತ್ತಿ ಮಠ
 (4)ಚಿದಾನಂದ ಮೂರ್ತಿ
ಸರಿ ಉತ್ತರ

(4) ಚಿದಾನಂದ ಮೂರ್ತಿ


60.‘ಹೊಸಅಂಗಿ’ – ಈ ಸಂಧಿಯ ಉದಾಹರಣೆ
 (1)ಆಗಮ
 (2)ಲೋಪ
 (3)ಪ್ರಕೃತಿಭಾವ
 (4)ಆದೇಶ
ಸರಿ ಉತ್ತರ

(3) ಪ್ರಕೃತಿಭಾವ


61.‘ಬಸವ’ – ಈ ಪದದ ತತ್ಸಮ
 (1)ಋಷಭ
 (2)ೠಷಭಾ
 (3)ವಸವ
 (4)ವೃಷಭ
ಸರಿ ಉತ್ತರ

(4) ವೃಷಭ


62.ಅರಿಸಮಾಸ ಪದ
 (1)ರಣಶೂರ
 (2)ಮಂಗಳಾರತಿ
 (3)ಹೊಸಗನ್ನಡ
 (4)ಮೂಲೋಕ
ಸರಿ ಉತ್ತರ

(2) ಮಂಗಳಾರತಿ


63.………….. ಎಂಬುದು ಭಾವಸೂಚಕಾವ್ಯಯ.
 (1)ಭಲಿ
 (2)ಬಾಲ
 (3)ಭಾಳು
 (4)ಭಲಾ
ಸರಿ ಉತ್ತರ

(4) ಭಲಾ


64.ಸುಲಿದ ಬಾಳೆ ಹಣ್ಣಿನಂದದಿ ಕನ್ನಡ ನುಡಿ ಎಂಬುದು …………..
 (1)ಉಪಮಾ ಅಲಂಕಾರ
 (2)ರೂಪಕ ಅಲಂಕಾರ
 (3)ದೀಪಕ ಅಲಂಕಾರ
 (4)ಉತ್ಪ್ರೇಕ್ಷಾಲಂಕಾರ
ಸರಿ ಉತ್ತರ

(1) ಉಪಮಾ ಅಲಂಕಾರ


65.ಸ್ವತಂತ್ರವಾಗಿ ಉಚ್ಚಾರವಾಗದ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ
 (1)ಯೋಗವಾಹ
 (2)ಪ್ಲುುತ
 (3)ಸ್ವರ
 (4)ವ್ಯಂಜನ
ಸರಿ ಉತ್ತರ

(4) ವ್ಯಂಜನ


ಸೂಚನೆಗಳು : ಕೆಳಗಿನ ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 66 – 69) ಕನ್ನಡ ಮೂಲದ್ದು ಅಲ್ಲದ (ಅನ್ಯಭಾಷೆಯಿಂದ ಸ್ವೀಕೃತವಾದ) ಶಬ್ದವನ್ನು ಗುರುತಿಸಿ.

ಉದಾಹರಣೆ :
 (1)ದಾರಿ
 (2)ಹಾದಿ
 (3)ರಸ್ತೆ
 (4)ಕಾಡು
ಈ ನಾಲ್ಕು ಪದಗಳಲ್ಲಿ ‘‘ರಸ್ತೆ’’ ಮಾತ್ರ ಅನ್ಯಭಾಷೆಯಿಂದ ಸ್ವೀಕೃತವಾದ ಪದವಾಗಿದೆ. ಆದುದರಿಂದ ಇಲ್ಲಿ (3) ನ್ನು ಗುರುತಿಸಬೇಕು.
66.(1)ದಿವಾನ
 (2)ಅರಸು
 (3)ಆಳು
 (4)ಅಂಬಿಗ
ಸರಿ ಉತ್ತರ

(1) ದಿವಾನ


67.(1)ಜೀವನ
 (2)ಹಾಲು
 (3)ಗದ್ದೆ
 (4)ಗುಲಾಮ
ಸರಿ ಉತ್ತರ

(4) ಗುಲಾಮ


68.(1)ಇನಾಮು
 (2)ಬಹುಮಾನ
 (3)ಉಡುಗೆ
 (4)ಗಮನ
ಸರಿ ಉತ್ತರ

(1) ಇನಾಮು


69.(1)ಮನೆ
 (2)ಜವಾನ
 (3)ಮೋಡ
 (4)ಸಾಹಸ
ಸರಿ ಉತ್ತರ

(2) ಜವಾನ


ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 70 – 72) ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ ಸೂಕ್ತವಾದುದನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ ಆಗ (4) ನ್ನು ಗುರುತಿಸಿ.

ಉದಾಹರಣೆ :
ಮಕ್ಕಳು ಸಂಗೀತವನ್ನು ಸುಶ್ರಾವ್ಯವಾಗಿ ಆಡಿದರು.
 (1)ಹಾಡಿದರು
 (2)ಆಲಿಸಿದರು
 (3)ಮಾಡಿಸಿದರು
 (4)ಸುಧಾರಣೆ ಬೇಕಿಲ್ಲ
ಇಲ್ಲಿ ‘‘ಆಡಿದರು’’ ಎಂಬುದು ದೋಷವಾಗಿದ್ದು ‘‘ಹಾಡಿದರು’’ ಎಂದಿರಬೇಕು ಆದುದರಿಂದ (1) ನ್ನು ಗುರುತಿಸಬೇಕು.
70.ರಸ್ತೆಯ ದುರಸ್ತಿ ಕಾರ್ಯದಿಂದ ಸಂಚಾರಕ್ಕೆ ಅನಾನುಕೂಲವಾಗಿದೆ.
 (1)ಅನನುಕೂಲ
 (2)ಅನಾನೂಕುಲ
 (3)ಅನಾನೂಕೂಲ
 (4)ಸುಧಾರಣೆ ಬೇಕಿಲ್ಲ
ಸರಿ ಉತ್ತರ

(1) ಅನನುಕೂಲ


71.ಗಂಧೋದಕದ ಸ್ನಾನ ಮಾಡುವುದು ಒಳ್ಳೆಯದು
 (1)ಗಂದೊಧಕ
 (2)ಘಂದೊದಕ
 (3)ಘಂಧೋದಕ
 (4)ಸುಧಾರಣೆ ಬೇಕಿಲ್ಲ
ಸರಿ ಉತ್ತರ

(4) ಸುಧಾರಣೆ ಬೇಕಿಲ್ಲ


72.ಚುನಾವಣೆಯ ಸಭೆಯಲ್ಲಿ ಬಹಳ ಜನ ಸೇರಿದ್ದರು.
 (1)ಚುಣಾವಣೆ
 (2)ಛುನಾವಣೆ
 (3)ಚುಣಾವನೆ
 (4)ಸುಧಾರಣೆ ಬೇಕಿಲ್ಲ
ಸರಿ ಉತ್ತರ

(4) ಸುಧಾರಣೆ ಬೇಕಿಲ್ಲ


ಸೂಚನೆಗಳು: ಕೆಳಗಿನವುಗಳಲ್ಲಿ (ಪ್ರಶ್ನೆ ಸಂಖ್ಯೆ 73 – 77) ಗೆರೆಹಾಕಿದ ಭಾಗಗಳು ತಪ್ಪಾಗಿವೆ. ಅವುಗಳ ಮುಂದೆ ಕೊಟ್ಟ ನಾಲ್ಕು ಪರ್ಯಾಯ ರೂಪಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.

ಉದಾಹರಣೆ :
ಕುವೆಂಪು ಚೋಮನದುಡಿ ಎಂಬ ಕಾದಂಬರಿಯನ್ನು ರಚಿಸಿದ್ದಾರೆ.
 (1)ಬೆಟ್ಟದ ಜೀವ
 (2)ಕಾನೂರ ಹೆಗ್ಗಡತಿ
 (3)ಚಿಕ್ಕವೀರ ರಾಜೇಂದ್ರ
 (4)ದುರ್ಗಾಸ್ತಮಾನ
ಇಲ್ಲಿ ‘‘ಕಾನೂರ ಹೆಗ್ಗಡತಿ’’ ಸರಿಯಾದ ಉತ್ತರ ಆದುದರಿಂದ (2) ನ್ನು ಗುರುತಿಸಬೇಕು.
73.ಕನಕದಾಸರ ಪೂರ್ವಾಶ್ರಮದ ಹೆಸರು ಶ್ರೀನಿವಾಸ ನಾಯಕ
 (1)ಶ್ರೀಪಾದರು
 (2)ಪುರಂದರ ದಾಸ
 (3)ಗೋಪಾಲದಾಸ
 (4)ವಿಜಯದಾಸ
ಸರಿ ಉತ್ತರ

(2) ಪುರಂದರ ದಾಸ


74.ಜೈಮಿನಿ ಭಾರತವು ಭಾಮಿನಿ ಷಟ್ಪದಿಯಲ್ಲಿದೆ.
 (1)ವಾರ್ಧಕ ಷಟ್ಪದಿ
 (2)ಕುಸುಮ ಷಟ್ಪದಿ
 (3)ಪರಿರ್ವಧಿನಿ ಷಟ್ಪದಿ
 (4)ಶರ ಷಟ್ಪದಿ
ಸರಿ ಉತ್ತರ

(1) ವಾರ್ಧಕ ಷಟ್ಪದಿ


75.ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ ನಾಡು ಕನ್ನಡ ನಾಡು ಎಂಬುದಾಗಿ ಹರಿಶ್ಚಂದ್ರ ಕಾವ್ಯದಲ್ಲಿ ಹೇಳಲಾಗಿದೆ.
 (1)ವಿಕ್ರಮಾರ್ಜುನ ವಿಜಯ
 (2)ಸಾರ್ವ ಭೀಮ ವಿಜಯ
 (3)ಕವಿರಾಜ ಮಾರ್ಗ
 (4)ವಡ್ಡಾರಾಧನೆ
ಸರಿ ಉತ್ತರ

(3) ಕವಿರಾಜ ಮಾರ್ಗ


76.ನಂಜುಂಡಕವಿ ಮಿತ್ರಾವಿಂದಗೋವಿಂದ ನಾಟಕ ಬರೆದಿದ್ದಾನೆ.
 (1)ತಿರುಮಲಾರ್ಯ
 (2)ಸಿಂಗರಾರ್ಯ
 (3)ಸಿಂಗಿರಾಜ
 (4)ಚಾಮರಸ
ಸರಿ ಉತ್ತರ

(2) ಸಿಂಗರಾರ್ಯ


77.ನಯಸೇನನು ‘ಕರ್ಣಟಕ ಕಾದಂಬರಿ’ ಕೃತಿಯನ್ನು ಬರೆದನು
 (1)ಒಂದನೇ ನಾಗವರ್ಮ
 (2)ನಾಗವರ್ಮಾಚಾರ್ಯ
 (3)ಎರಡನೇ ನಾಗವರ್ಮ
 (4)ನಾಗಚಂದ್ರ
ಸರಿ ಉತ್ತರ

(1) ಒಂದನೇ ನಾಗವರ್ಮ


ಸೂಚನೆಗಳು: ಮುಂದಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 78 – 82) ಪದಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥಪೂರ್ಣವಾಗುವಂತೆ ಗೆರೆಹಾಕಿ ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ. ಅವುಗಳ ಅನುಕ್ರಮವನ್ನು ಗುರುತಿಸಿ.

ಉದಾಹರಣೆ :
77.ವಿದ್ಯಾರ್ಥಿಗಳು
P
ಜಾಸ್ತಿಯಾಗಿದೆ
Q
ಆಕರ್ಷಿತರಾಗುತ್ತಿರುವುದು
R
ದುರಭ್ಯಾಸಗಳ ಕಡೆಗೆ
S
 (1)P S R Q
 (2)Q R S P
 (3)S Q R P
 (4)Q S R P
ಇಲ್ಲಿ P S R Q ಎಂಬುದು ಸರಿಯಾದ ಜೋಡಣೆಯ ಕ್ರಮ. ಅದುದರಿಂದ ಇಲ್ಲಿ (1) ನ್ನು ಗುರುತಿಸಬೇಕು.
78.ಕರುಳಿಲ್ಲ
P
ತಲೆಯಾತಂಗೆ
Q
ತಲೆಯಿಲ್ಲ
R
ಒಡಲು ನೋಡಾ
S
 (1)P Q R S
 (2)S Q R P
 (3)R Q P S
 (4)R P Q S
ಸರಿ ಉತ್ತರ

(3) R Q P S


79.ಪ್ರಶ್ನೆ
P
ವಿಜ್ಞಾನದ
Q
ಕೇಳುವುದು
R
ಅಡಿಪಾಯವೇ
S
 (1)Q R S P
 (2)Q S P R
 (3)R S P Q
 (4)P R Q S
ಸರಿ ಉತ್ತರ

(2) Q S P R


80.ಮರಸೊಬಗು
P
ಹೊಸಚಿಗುರು
Q
ಹಳೆಬೇರು
R
ಕೂಡಿರಲು
S
 (1)R Q S P
 (2)Q R P S
 (3)S P Q R
 (4)S P R Q
ಸರಿ ಉತ್ತರ

(1) R Q S P


81.ದೈಯಿಕ ವ್ಯಾಯಾಮ ಮಾಡುವುದು
P
ಶರೀರಕ್ಕೆ
Q
ಪ್ರತಿದಿನವೂ
R
ತುಂಬಾ ಒಳ್ಳೆಯದು
S
 (1)Q R S P
 (2)R P Q S
 (3)P R Q S
 (4)Q R P S
ಸರಿ ಉತ್ತರ

(2) R P Q S


82.ವರ್ಗಕ್ಕೆ
P
ದ್ರಾವಿಡ ಭಾಷಾ
Q
ಸೇರಿದೆ
R
ಕನ್ನಡ ಭಾಷೆಯು
S
 (1)R S P Q
 (2)P R S Q
 (3)S R Q P
 (4)S Q P R
ಸರಿ ಉತ್ತರ

(4) S Q P R


83.ಎಸ್.ಎಲ್. ಭೈರಪ್ಪರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ
 (1)ಮಂದ್ರ
 (2)ದಾಟು
 (3)ಪರ್ವ
 (4)ವಂಶವೃಕ್ಷ
ಸರಿ ಉತ್ತರ

(2) ದಾಟು


84.‘ಇಗೋ ಕನ್ನಡ’ ಎಂಬ ಹೆಸರಿನ ಅಂಕಣ ಬರೆಯುತ್ತಿದ್ದವರು
 (1)ಪಾ.ವೆಂ. ಆಚಾರ್ಯ
 (2)ಅಮೃತ ಸೋಮೇಶ್ವರ
 (3)ಕೆ.ವಿ. ನಾರಾಯಣ
 (4)ಜಿ. ವೆಂಕಟಸುಬ್ಬಯ್ಯ
ಸರಿ ಉತ್ತರ

(4) ಜಿ. ವೆಂಕಟಸುಬ್ಬಯ್ಯ


85.ಪಟ್ಟಿ I ಮತ್ತು ಪಟ್ಟಿ II ನ್ನು ಹೋಲಿಸಿ ಕೆಳಗೆ ನೀಡಿರುವ ಉತ್ತರಗಳ ಗುಂಪಿನಲ್ಲಿ ಸರಿಹೊಂದುವುದನ್ನು ಗುರುತಿಸಿ :
  ಪಟ್ಟಿ I ಪಟ್ಟಿ II
 A.ಹರಿಶ್ಚಂದ್ರ ಕಾವ್ಯI. ಸಾಂಗತ್ಯ
 B.ಆದಿ ಪುರಾಣII. ಷಟ್ಟದಿ
 C.ಭರತೇಶ ವೈಭವIII. ಕಂದ
 D.ಅಜಿತ ತೀರ್ಥಂಕರ ಪುರಾಣIV. ಚಂಪೂ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIVII
 (2)IIIVIIII
 (3)IIIIIIIV
 (4)IIIIIIVI
ಸರಿ ಉತ್ತರ

(2) II IV I III


86.‘ಸಂಜೆಗಣ್ಣಿನ ಹಿನ್ನೋಟ’ ಇದು ಯಾರ ಆತ್ಮಕಥನ ?
 (1)ಎಂ. ಗೋಪಾಲ ಕೃಷ್ಣ ಅಡಿಗ
 (2)ಎಚ್.ಎಲ್. ನಾಗೇಗೌಡ
 (3)ರಾವ್ ಬಹಾದ್ದೂರ್
 (4)ಎ.ಎನ್. ಮೂರ್ತಿರಾವ್
ಸರಿ ಉತ್ತರ

(4) ಎ.ಎನ್. ಮೂರ್ತಿರಾವ್


ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 87 – 92) (1) (2) (3) ಎಂಬ ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗಳಿಗೆ ಸಂಬಂಧಿಸಿದ ದೋಷವಿದ್ದರೆ ಆ ಭಾಗವನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ‘‘ತಪ್ಪಿಲ್ಲ’’ ಎಂಬ ನಾಲ್ಕನೆ (4) ಭಾಗವನ್ನು ಗುರುತಿಸಿ.

ಉದಾಹರಣೆ :
ವಿದ್ಯಾರ್ಥಿಗಳು
(1)
ಶಾಲೆಗೆ
(2)
ಮುಗಿಸಿಕೊಂಡು ಬಂದರು
(3)
ತಪ್ಪಿಲ್ಲ
(4)
ಇಲ್ಲಿ ಭಾಗ (2) ರಲ್ಲಿ ‘‘ಶಾಲೆಯನ್ನು’’ ಎಂದಿರ ಬೇಕಾಗಿತ್ತು. ಈ ಭಾಗದಲ್ಲಿ ದೋಷವಿರುವುದರಿಂದ ಇಲ್ಲಿ (2) ನ್ನು ಗುರುತಿಸಬೇಕು.
87.ರಾಘವಾಂಕನನ್ನು
(1)
ಶಟ್ಪದಿಯ ಬ್ರಹ್ಮ
(2)
ಎಂದು ಕರೆಯಲಾಗಿ
(3)
ತಪ್ಪಿಲ್ಲ
(4)
ಸರಿ ಉತ್ತರ

(2)


88.ನಾನು
(1)
ನಮ್ಮ ಗುರುಗಳಿಗೆ
(2)
ಹಲವು ವಿಚಾರಗಳನ್ನು ಕಲಿತೆನು
(3)
ತಪ್ಪಿಲ್ಲ
(4)
ಸರಿ ಉತ್ತರ

(2)


89.ಮತಧಾನವು
(1)
ನಮ್ಮ ಪವಿತ್ರ
(2)
ಕರ್ತವ್ಯವಾಗಿ.
(3)
ತಪ್ಪಿಲ್ಲ
(4)
ಸರಿ ಉತ್ತರ

(1)


90.ಬುದ್ಧಿವಂತನಾದ ಅವನು
(1)
ಪಾಠವನ್ನು
(2)
ಚೆನ್ನಾಗಿ ಓದಿದರು
(3)
ತಪ್ಪಿಲ್ಲ
(4)
ಸರಿ ಉತ್ತರ

(3)


91.ನಮ್ಮ ಪರೀಕ್ಷೆ
(1)
ಮುಗಿಯಿತು.
(2)
ತಂದೆಗೆ ಮಗನು ತಿಳಿಸಿದನು
(3)
ತಪ್ಪಿಲ್ಲ
(4)
ಸರಿ ಉತ್ತರ

(2)


92.ದೇವರು
(1)
ಸಮಸ್ತಲೋಕಗಳನ್ನು
(2)
ಪ್ರೀತಿಯಿಂದ ಕಾಪಾಡುವನು
(3)
ತಪ್ಪಿಲ್ಲ
(4)
ಸರಿ ಉತ್ತರ

(4)


93.ಕೆಳಗಿನವರಲ್ಲಿ ಪಂಪ ಪ್ರಶಸ್ತಿ ವಿಜೇತ ಕವಿ
 (1)ಬಿ.ಎಂ. ಶ್ರೀ
 (2)ತಿ.ನಂ. ಶ್ರೀ
 (3)ದ.ರಾ. ಬೇಂದ್ರೆ
 (4)ಅ.ನ. ಕೃ.
ಸರಿ ಉತ್ತರ

(2) ತಿ.ನಂ. ಶ್ರೀ


94.‘‘ನೀರೊಳಗಿರ್ದುಂ ಬೆಮರ್ತನುರಗ ಪತಾಕಂ’’ ಈ ಮಾತುಗಳು ಯಾವ ಕೃತಿಯಲ್ಲಿ ಬಂದಿವೆ?
 (1)ಗದಾಯುದ್ಧ
 (2)ರಾಮಚಂದ್ರ ಚರಿತ ಪುರಾಣ
 (3)ಕರ್ಣಾಟ ಭಾರತ ಕಥಾ ಮಂಜರಿ
 (4)ಪಂಪ ಭಾರತ
ಸರಿ ಉತ್ತರ

(1) ಗದಾಯುದ್ಧ


95.ವೈದೇಹಿ ಇದು ಯಾರ ಕಾವ್ಯ ನಾಮ ?
 (1)ತಿರುಮಲೆ ರಾಜಮ್ಮ
 (2)ಜಾನಕಿ ಎಸ್. ಮೂರ್ತಿ
 (3)ಬಿ.ಎನ್. ಸುಬ್ಬಮ್ಮ
 (4)ವೆಂಕಟಲಕ್ಷ್ಮಿ
ಸರಿ ಉತ್ತರ

(2) ಜಾನಕಿ ಎಸ್. ಮೂರ್ತಿ


96.ಅಜಗಣ್ಣ ಇದು ಯಾರ ವಚನಗಳ ಅಂಕಿತ ?
 (1)ಅಕ್ಕಮಹಾದೇವಿ
 (2)ಗಂಗಾಂಬಿಕೆ
 (3)ನೀಲಾಂಬಿಕೆ
 (4)ಮುಕ್ತಾಯಕ್ಕ
ಸರಿ ಉತ್ತರ

(4) ಮುಕ್ತಾಯಕ್ಕ


ಸೂಚನೆಗಳು : ಈ ಕೆಳಗೆ (ಪ್ರಶ್ನೆ ಸಂಖ್ಯೆ 97- 100) P Q R S ಎಂಬ ನಾಲ್ಕು ವಾಕ್ಯಗಳನ್ನು ಕೊಡಲಾಗಿದೆ. ಈ ವಾಕ್ಯಗಳು ಸ್ಥಾನಪಲ್ಲಟವಾಗಿವೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಉತ್ತರವನ್ನು ಗುರುತಿಸಬೇಕು.

ಉದಾಹರಣೆ :
 P.ಪುಲಿಗೆರೆ, ಕಿಸುವೊಳಲ್, ಕೊಪ್ಪಳ ಮತ್ತು ಒಕ್ಕುಂದ ಇವೇ ಆ ನಾಲ್ಕು ನಗರಗಳು.
 Q.ಒಂಭತ್ತನೆಯ ಶತಮಾನದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು.
 R.ಆ ನಾಡಿನಲ್ಲಿನ ನಾಲ್ಕು ನಗರಗಳ ಮಧ್ಯದ ಕನ್ನಡವೇ ಕನ್ನಡದ ತಿರುಳೆಂದು ಕವಿ ಹೇಳಿದ್ದಾನೆ.
 S.ಆ ನಾಡಿನಲ್ಲಿ ವಾಸವಾಗಿದ್ದ ಜನತೆಯ ಉನ್ನತ ಸಂಸ್ಕೃತಿಯಿಂದಾಗಿ ಇಡೀ ವಿಶ್ವದಲ್ಲಿ ಕನ್ನಡ ನಾಡು ಒಂದು ವಿಶೇಷ ಸ್ಥಾನವನ್ನು ಪಡೆದಿತ್ತು.
 (1)Q S R P
 (2)S R Q P
 (3)P Q R S
 (4)R P Q S
ಇಲ್ಲಿ ಸರಿಯಾದ ಉತ್ತರ Q S R P ಆದುದರಿಂದ (1) ನ್ನು ಗುರುತಿಸಬೇಕು.
97.ಭಾರತರತ್ನ ಅಂಬೇಡ್ಕರರ ಬದುಕಿನ ಒಂದು ಘಟನೆ
 P.ದುಃಖದಿಂದ ಅಂಬೇಡ್ಕರ್ ಮನೆಗೆ ಬಂದರು
 Q.ಬಾಲಕ ಅಂಬೇಡ್ಕರ ಕ್ಷೌರಿಕನ ಬಳಿಗೆ ಹೋದರು
 R.ಅವರನ್ನು ಅಕ್ಕಂದಿರು ಸಮಾಧಾನ ಮಾಡಿ ಕೂದಲನ್ನು ತಾವೇ ಕತ್ತರಿಸಿದರು
 S.ಕ್ಷೌರಿಕನು ಕ್ಷೌರ ಮಾಡಲು ನಿರಾಕರಿಸಿದ. ನಾಯಿ ನರಿಗಳನ್ನು ಮುಟ್ಟುವ ಜನರು ನನ್ನನ್ನೇಕೆ ಮುಟ್ಟುವುದಿಲ್ಲ ನಾನು ಅಷ್ಟೇ ಕೀಳೆ? ಎಂದು ಚಿಂತಿಸಿದರು
 (1)P R S Q
 (2)Q S P R
 (3)Q P R S
 (4)R S Q P
ಸರಿ ಉತ್ತರ

(2) Q S P R


98.P.ಅವನತಿಯ ಅಂಚಿನಲ್ಲಿರುವವನು ಉನ್ನತಿಗೇರಬಲ್ಲ
 Q.ಮಾನವತೆ ಮತ್ತು ದಾನವತೆಗಳೆರಡಕ್ಕೂ ಮನುಷ್ಯನ ಅಂತರ್ಯದಲ್ಲಿ ಜಾಗವಿದೆ
 R.ಉನ್ನತಿಯ ಶಿಖರದಲ್ಲಿರುವನು ಅವನತಿಯಂಚಿಗೆ ಸರಿದು ಬಿಡಬಲ್ಲ
 S.ಅವನತಿ ಮತ್ತು ಉನ್ನತಿಗಳೆರಡೂ ವ್ಯಕ್ತಿಯ ನಡೆಯನ್ನೇ ಅವಲಂಬಿಸಿರುತ್ತವೆ.
 (1)P Q R S
 (2)Q S R P
 (3)R S Q P
 (4)S R Q P
ಸರಿ ಉತ್ತರ

(2) Q S R P


99.P.2500 ವರ್ಷಗಳ ಹಿಂದೆ ಸಂಸ್ಕೃತದಲ್ಲಿ ಬರೆದ ‘‘ಮಹಾಕಾವ್ಯವೇ’ ‘ಮಹಾಭಾರತ’ ಇದರಲ್ಲಿ 18 ಪರ್ವಗಳಿವೆ
 Q.ಈ ಗೀತೆ ಕೂಡಾ ಮಹಾಭಾರತದ 6 ನೇ ಪರ್ವದಲ್ಲಿದ್ದು ಇದರಲ್ಲಿಯೂ 18 ಅಧ್ಯಾಯಗಳಿರುತ್ತವೆ
 R.ಕೃಷ್ಣಾರ್ಜುನರ ನಡುವೆ ನಡೆದ ಸಂಭಾಷಣೆ ಇದಾಗಿದ್ದು,
 S.ಇದನ್ನು ಹಿಂದೂಗಳ ಪವಿತ್ರ ಗ್ರಂಥ’ ಎನ್ನುತ್ತಾರೆ ಪದಶಃ ಅರ್ಥ ‘‘ಭಗವಂತ ಹಾಡಿದ ಗೀತೆ’’ ಯೇ ‘‘ಭಗವದ್ಗೀತೆ’’ – ಯಾಗಿದೆ.
 (1)R P S Q
 (2)S R Q P
 (3)S P R Q
 (4)P R S Q
ಸರಿ ಉತ್ತರ

(4) P R S Q


100.ಗುರುವಿನ ಬಳಿ ಒಬ್ಬ ಕೇಳುತ್ತಾನೆ ‘ಗುರುವೇ ದಾರಿಯಾವುದು….’
 P.ನೀನು ದಾರಿಯ ಬಗ್ಗೆ ಯೋಚಿಸುತ್ತಿಲ್ಲ ನಿನ್ನ ಬಗ್ಗೆ ಚಿಂತಿಸುತ್ತಿದ್ದೆ ಅದಕ್ಕೆ
 Q.ಹಾಗಿದ್ದಲ್ಲಿ ನನಗೇಕೆ ಅದು ಕಾಣಿಸುತ್ತಿಲ್ಲ?
 R.ಅಯ್ಯಾ ಅದು ನಿನ್ನ ಕಣ್ಣ ಎದುರಲ್ಲೇ ಇದೆ ಎನ್ನುತ್ತಾನೆ ಗುರು
 S.ಹಾಗಿದ್ದಲ್ಲಿ ಅದು ನಿಮಗೆ ಕಾಣಿಸುತ್ತದೋ ? ಎಲ್ಲಿಯವರೆಗೆ ನನಗೆ ಕಾಣಿಸುವುದಿಲ್ಲ ನಿನಗೆ ಕಾಣಿಸುತ್ತದೆ ಎಂಬಂತೆ ಯೋಚಿಸುತ್ತೀಯೋ ಅಲ್ಲಿಯವರೆಗೆ ನಿನ್ನ ಕಣ್ಣುಗಳಿಗೆ ಮಂಜು ಮುಸುಕಿರುತ್ತದೆ.
 (1)P R Q S
 (2)R Q P S
 (3)Q R S P
 (4)R P S Q
ಸರಿ ಉತ್ತರ

(2) R Q P S


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment