WhatsApp Group Join Now
Telegram Group Join Now

kpsc group c GS previous question paper 19.12.2021

KPSC GROUP ‘C’ NON TECHNICAL ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆ

1.ಕರ್ನಾಟಕ ರಾಜ್ಯದಲ್ಲಿ ಯಾವ ಪ್ರದೇಶದಲ್ಲಿ ಸಾಂದ್ರ ಬೇಸಾಯ ಪದ್ಧತಿಯನ್ನು ಅನುಸರಿಸಲಾಗಿದೆ ?
 (1)ಮೈದಾನ ಪ್ರದೇಶ
 (2)ಕರಾವಳಿ ಪ್ರದೇಶ
 (3)ನೀರಾವರಿ ಪ್ರದೇಶ
 (4)ಶುಷ್ಕ ಪ್ರದೇಶ

CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


2.ಸೂಯೆಜ್ ಕಾಲುವೆ ವಿಶ್ವದಲ್ಲೇ ದಟ್ಟವಾದ ಹಡಗು ಸಂಚಾರ ಹೊಂದಿದ್ದು ಈ ಕಾಲುವೆ ಯಾವ ದೇಶದ ಒಡೆತನಕ್ಕೆ ಸೇರಿರುತ್ತದೆ ?
 (1)ಪೋರ್ಚುಗಲ್
 (2)ಪನಾಮ
 (3)ಈಜಿಪ್ಟ್
 (4)ರಷ್ಯಾ
CORRECT ANSWER

(3) ಈಜಿಪ್ಟ್


3.ಮೊಬೈಲ್ ಪೋನ್‌ಗಳ ವಿವಿಧ ರಿಂಗ್ ಟೋನ್ ತರಂಗಗಳಿಂದ ಅವಸಾನದ ಅಂಚಿಗೆ ತಲುಪಿದ ಪಕ್ಷಿ
 (1)ಪಿಕಲಾರ
 (2)ಝೇಂಕಾರದ ಹಕ್ಕಿ
 (3)ಗುಬ್ಬಚ್ಚಿ
 (4)ಕಿವಿ ಹಕ್ಕಿ
CORRECT ANSWER

(3) ಗುಬ್ಬಚ್ಚಿ


4.ಸೌರಶಕ್ತಿಯಿಂದ ಚಾಲಿತವಾದ ಮೊದಲ ವಿಮಾನ ನಿಲ್ದಾಣ
 (1)ಕೋಲ್ಕತಾ
 (2)ಕೋಚಿನ್
 (3)ಮುಂಬೈ
 (4)ಮಂಗಳೂರು
CORRECT ANSWER

(2) ಕೋಚಿನ್


5.ಗಂಗರ ದೊರೆ ಶಿವಮಾರ ರಚಿಸಿದ ಕೃತಿಗಳು ಯಾವುವು?
 (1)ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯ
 (2)ಗಜಶತಕ ಮತ್ತು ಸೇತುಧಾನದ
 (3)ನೀತಿಶಾಸ್ತ್ರ ಮತ್ತು ಬೃಹತ್ ಕಥ
 (4)ದೀಪವಂಶ ಮತ್ತು ಮಹಾವಂಶ
CORRECT ANSWER

(2) ಗಜಶತಕ ಮತ್ತು ಸೇತುಧಾನದ


6.ರಾಷ್ಟ್ರಕೂಟರ ದೊರೆ ಕೃಷ್ಣ-I ಕಟ್ಟಿಸಿದ ಎಲ್ಲೋರದ ಕೈಲಾಸನಾಥ ದೇವಾಲಯ ಎಷ್ಟನೆ ಶತಮಾನದಲ್ಲಿ ಕಟ್ಟಲ್ಪಟ್ಟಿತು ?
 (1)6ನೇ ಶತಮಾನ
 (2)8ನೇ ಶತಮಾನ
 (3)9ನೇ ಶತಮಾನ
 (4)10ನೇ ಶತಮಾನ
CORRECT ANSWER

(2) 8ನೇ ಶತಮಾನ


7.‘ಇಬ್ರಾಹಿಂ ರೋಜಾ’ ದಕ್ಷಿಣ ಭಾರತದ ‘ತಾಜ್ ಮಹಲ್’ ಎಂದು ಹೇಳಿಕೆ ಕೊಟ್ಟವರು ಯಾರು ?
 (1)ಜೇಮ್ಸ್ ಮಿಲ್
 (2)ಫರ್ಗೂಸನ್
 (3)ಕಸಿನ್ಸ್
 (4)ವಿ.ಎ.ಸ್ಮಿತ್
CORRECT ANSWER

(3) ಕಸಿನ್ಸ್


8.ಬೆಂಗಳೂರಿನ ಸೆಂಟ್ರಲ್ ಕಾಲೇಜು ಕಟ್ಟಡ ಯಾವ ಶೈಲಿಯಲ್ಲಿದೆ ?
 (1)ಅಯೋನಿಕ್
 (2)ಗಾಥಿಕ್
 (3)ಕಾರಿಂಥಿಯನ್
 (4)ವೇಸರ
CORRECT ANSWER

(2) ಗಾಥಿಕ್


9.ಕಾಳಿದಾಸನ ಮಾಳವಿಕಾಗ್ನಿ ಮಿತ್ರಂ ಕುರಿತು ತಿಳಿಸುತ್ತದೆ
 (1)ಶಾತವಾಹನರು
 (2)ಶುಂಗರು
 (3)ಕಣ್ವರು
 (4)ಕುಶಾನರು
CORRECT ANSWER

(2) ಶುಂಗರು


10.ದೇವಿಚಂದ್ರಗುಪ್ತಂ ಬರೆದವರು
 (1)ವಿಶಾಖದತ್ತ
 (2)ಬಾಣಭಟ್ಟ
 (3)ಕಾಳಿದಾಸ
 (4)ಭಾಸ
CORRECT ANSWER

(1) ವಿಶಾಖದತ್ತ


11.ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರಯಾಣಿಕರ ಸರಿಯಾದ ಕಾಲಾನುಕ್ರಮವನ್ನು ಆಯ್ಕೆಮಾಡಿ
 (1)ಮೆಗಾಸ್ತನೀಸ್, ಹ್ಯೂಯೆನ್ ತ್ಸಾಂಗ್, ಇಟ್ಸಿಂಗ್, ನಿಕೊಲೊ ಕಾಂಟಿ
 (2)ಹ್ಯೂಯೆನ್ ತ್ಸಾಂಗ್, ಮೆಗಾಸ್ತನೀಸ್, ನಿಕೋಲೋ ಕಾಂಟಿ, ಇಟ್ಟಿಂಗ್
 (3)ಇಟ್ಟಿಂಗ್, ಹ್ಯೂಯೆನ್ ತ್ಸಾಂಗ್, ಮೆಗಾಸ್ತನೀಸ್, ನಿಕೊಲೊ ಕಾಂಟಿ
 (4)ನಿಕೊಲೊ ಕಾಂಟಿ, ಇಟ್ಟಿಂಗ್, ಮೆಗಾಸ್ತನೀಸ್, ಹ್ಯೂಯೆನ್ ತ್ಸಾಂಗ್
CORRECT ANSWER

(1) ಮೆಗಾಸ್ತನೀಸ್, ಹ್ಯೂಯೆನ್ ತ್ಸಾಂಗ್, ಇಟ್ಸಿಂಗ್, ನಿಕೊಲೊ ಕಾಂಟಿ


12.ಪೋರ್ಚುಗೀಸ್ ಗವರ್ನರ್, ಅಲ್ಪುಕರ್ಕ್, ಭಟ್ಕಳದಲ್ಲಿ _____________ ರ ಅನುಮತಿಯೊಂದಿಗೆ ಕೋಟೆಯನ್ನು ನಿರ್ಮಿಸಿದನು.
 (1)ವಿರೂಪಾಕ್ಷ II
 (2)ಕೃಷ್ಣದೇವರಾಯ
 (3)ಅಚ್ಚುತ ರಾಯ
 (4)ಸದಾಶಿವ ರಾಯ
CORRECT ANSWER

(2) ಕೃಷ್ಣದೇವರಾಯ


13.‘ದತ್ತು ಮಕ್ಕಳಿಗೆ ಹಕ್ಕಿಲ್ಲ’ – ನೀತಿಯ ಮೂಲಕ ಬ್ರಿಟೀಷರು ಆಕ್ರಮಿಸಿಕೊಂಡ ಭಾರತ ಮೊದಲ ರಾಜ್ಯಯಾವುದು ?
 (1)ಸತಾರ
 (2)ನಾಗಪುರ
 (3)ಕಾನ್ಪುರ
 (4)ಝಾನ್ಸಿ
CORRECT ANSWER

(1) ಸತಾರ


14.ರಾಜತ್ವ ದೈವದತ್ತ ಸಿದ್ಧಾಂತವನ್ನು ಪ್ರತಿಪಾದಿಸಿದ ದೆಹಲಿ ಸುಲ್ತಾನ
 (1)ಅಲ್ತಮಷ್
 (2)ಕುತ್ಬುದ್ದೀನ್ ಐಬಕ್
 (3)ಫಿರೋಜ್ ಷಾ
 (4)ಬಲ್ಬನ್
CORRECT ANSWER

(4) ಬಲ್ಬನ್


15.‘ಕಾಕೋರಿ ರೈಲು ಪಿತೂರಿ’ ಯನ್ನು ಸಂಘಟಿಸಿದವರು
 (1)ಭಗತ್ ಸಿಂಗ್
 (2)ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ
 (3)ಚಂದ್ರ ಶೇಖರ್ ಆಜಾದ್
 (4)ಉಧಾಮ್ ಸಿಂಗ್
CORRECT ANSWER

(2) ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ


16.ನಿರ್ವಾತದಲ್ಲಿ ಇಟ್ಟಿಗೆ ಹಾಗೂ ಹಕ್ಕಿಪುಕ್ಕ ಇವೆರಡೂ ಒಂದೇ ವೇಗದಲ್ಲಿ ಬೀಳಲು ಕಾರಣ ?
 (1)ಅವೆರಡರ ಮೇಲೂ ಗುರುತ್ವ ಬಲ ಸಮನಾಗಿರುವುದು
 (2)ಅವೆರಡರ ತೂಕ ಹಾಗೂ ದ್ರವ್ಯರಾಶಿಯ ನಡುವಿನ ಅನುಪಾತ ಸಮನಾಗಿರುವುದು
 (3)ನಿರ್ವಾತದಲ್ಲಿ ಗುರುತ್ವ ಇಲ್ಲದೇ ಇರುವುದು
 (4)ಅವೆರಡರ ತೂಕ ಸಮನಾಗಿರುವುದು
CORRECT ANSWER

(2) ಅವೆರಡರ ತೂಕ ಹಾಗೂ ದ್ರವ್ಯರಾಶಿಯ ನಡುವಿನ ಅನುಪಾತ ಸಮನಾಗಿರುವುದು


17.ಒಂದು ವೇಳೆ ಭೂಮಿ ತನ್ನ ಅಕ್ಷದ ಮೇಲೆ ಅಧಿಕ ವೇಗದಿಂದ ಸುತ್ತಿದರೆ
 (1)ನಮ್ಮ ತೂಕ ಕಡಿಮೆಯಾಗುತ್ತದೆ
 (2)ನಮ್ಮ ತೂಕ ಸ್ಥಿರವಾಗಿರುತ್ತದೆ
 (3)ನಮ್ಮ ತೂಕ ಹೆಚ್ಚುತ್ತದೆ
 (4)ನಮ್ಮ ತೂಕ ಶೂನ್ಯವಾಗುತ್ತದೆ
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


18.ಮೂಲಭೂತ ಬಲಗಳಲ್ಲಿ ಅತ್ಯಂತ ದುರ್ಬಲವಾದುದು
 (1)ನ್ಯೂಕ್ಲಿಯರ್ ಬಲ
 (2)ವಿದ್ಯುತ್ಕಾಂತೀಯ ಬಲ
 (3)ಗುರುತ್ವಬಲ
 (4)ದುರ್ಬಲ ನ್ಯೂಕ್ಲಿಯಾರ್ ಬಲ
CORRECT ANSWER

(3) ಗುರುತ್ವಬಲ


19.ವಾತಾವರಣದ ಹೊರಮೈಯಿಂದ ಉಡಾಯಿಸಲ್ಪಡುವ ಉತ್ಪ್ರೇಪಕದ ದಾರಿ
 (1)ಪಾರಬೋಲದಂತಿರುತ್ತದೆ
 (2)ವೃತ್ತಾಕಾರದಲ್ಲಿರುತ್ತದೆ
 (3)ಹೈಪರ್‌ರ್ಬೋಲದಂತಿರುತ್ತದೆ
 (4)ಆಂಡಾಕಾರದಲ್ಲಿರುತ್ತದೆ
CORRECT ANSWER

(4) ಆಂಡಾಕಾರದಲ್ಲಿರುತ್ತದೆ


20.ಬರಿಕಾಲಲ್ಲಿ ಕೆಂಡದ ಮೇಲೆ ನಡೆಯುವ ವ್ಯಕ್ತಿಗೆ ಯಾವುದೇ ಹಾನಿಯಾಗುವುದಿಲ್ಲ ಯಾಕೆಂದರೆ
 (1)ಕೆಂಡದ ವಾಹಕತೆ ಕಡಿಮೆ
 (2)ಕೆಂಡದ ವಾಹಕತೆ ಹೆಚ್ಚು
 (3)ಮರದ ಕೆಂಡ ಉರಿಯುತ್ತಿರುವಾಗಲೂ ತಂಪಾಗಿರುವ ಗುಣ ಹೊಂದಿದೆ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಕೆಂಡದ ವಾಹಕತೆ ಕಡಿಮೆ


21.ಎಥೆನಾಲ್ ಮತ್ತು ನೀರಿನ ಮಿಶ್ರಣವನ್ನು ಇದರಿಂದ ಬೇರ್ಪಡಿಸಬಹುದು
 (1)ಆವಿಯಾಗುವಿಕೆ
 (2)ಹೊರತೆಗೆಯುವಿಕೆ
 (3)ಶೋಧನೆ
 (4)ಭಾಗಶಃ ಬಟ್ಟಿ ಇಳಿಸುವಿಕೆ
CORRECT ANSWER

(4) ಭಾಗಶಃ ಬಟ್ಟಿ ಇಳಿಸುವಿಕೆ


22.ಅಸಿಟೈಲ್ ಸ್ಯಾಲಿಸಿಲಿಕ್ ಆಮ್ಲವನ್ನು ಇದಕ್ಕೆ ಬಳಸಲಾಗುತ್ತದೆ
 (1)ಅಶ್ರುವಾಯು
 (2)ನೋವು ನಿವಾರಕ
 (3)ನಿದ್ರಾಜನಕ
 (4)ಸುಗಂಧ ದ್ರವ್ಯ
CORRECT ANSWER

(2) ನೋವು ನಿವಾರಕ


23.ಥರ್ಮಾಕೋಲ್‌ನ ರಾಸಾಯನಿಕ ಅಂಶ :
 (1)ಪಾಲಿಐಸೊಪ್ರೆನ್
 (2)ನಿಯೋಪ್ರೆನ್
 (3)ಥಿಯೋಕೋಲ್
 (4)ಪಾಲಿಸ್ಟೈರೀನ್
CORRECT ANSWER

(4) ಪಾಲಿಸ್ಟೈರೀನ್


24.ಇವುಗಳಲ್ಲಿ ಯಾವುದು ಪ್ರಾಥಮಿಕ ಮಾಲಿನ್ಯಕಾರಕವಲ್ಲ?
 (1)SO2SO2
 (2)ಜ್ವಾಲಾಮುಖಿ ಬೂದಿ
 (3)O3O3
 (4)CO2CO2
CORRECT ANSWER

(3) O3O3


25.ಕೆಳಗಿನವುಗಳಲ್ಲಿ ಯಾವುದನ್ನು ತೈಲ ಸೋರಿಕೆಗಳನ್ನು ಸ್ವಚ್ಚಗೊಳಿಸಲು ಬಳಸಲಾಗುತ್ತದೆ ?
 (1)ಬ್ಯಾಸಿಲಸ್ ಸಬ್ಟಿಲಿಸ್
 (2)ಸ್ಕೂಡೋಮೊನಸ್ ಪುಟಿಡಾ
 (3)ಬ್ಯಾಸಿಲಸ್ ತುರಿಂಜಿಯೆನ್ಸಿಸ್
 (4)ಸ್ಯೂಡೋಮೊನಸ್ ಡೈನಿಟ್ರಿಫಿಕನ್ಸ್
CORRECT ANSWER

(2) ಸ್ಕೂಡೋಮೊನಸ್ ಪುಟಿಡಾ


26.ಖಾಯಂ ಕಾರ್ಯಾಂಗ ಎಂದರೆ
 (1)ರಾಜ್ಯಪಾಲರು
 (2)ಮುಖ್ಯಮಂತ್ರಿ
 (3)ಸಚಿವಸಂಪುಟ
 (4)ನಾಗರಿಕ ಸಿಬ್ಬಂದಿ
CORRECT ANSWER

(4) ನಾಗರಿಕ ಸಿಬ್ಬಂದಿ


27.ಯಾವ ಸಂವಿಧಾನಿಕ ತಿದ್ದುಪಡಿಯು ನಾಗರಿಕ ಸೇವಾ ವರ್ಗಕ್ಕೆ ಸಂಬಂಧಿಸಿದ ವಿವಾದಗಳು ಮತ್ತು ದೂರುಗಳ ವಿಷಯವಾಗಿ ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರ ನೀಡಿದೆ ?
 (1)42ನೇ ತಿದ್ದುಪಡಿ
 (2)54ನೇ ತಿದ್ದುಪಡಿ
 (3)104ನೇ ತಿದ್ದುಪಡಿ
 (4)84ನೇ ತಿದ್ದುಪಡಿ
CORRECT ANSWER

(1) 42ನೇ ತಿದ್ದುಪಡಿ


28.ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯು ಯಾವಾಗ ಸ್ಥಾಪನೆಯಾಯಿತು ?
 (1)30ನೇ ಅಕ್ಟೋಬರ್, 1948
 (2)26ನೇ ಅಕ್ಟೋಬರ್, 1986
 (3)6ನೇ ಅಕ್ಟೋಬರ್, 1986
 (4)6ನೇ ಅಕ್ಟೋಬರ್, 1976
CORRECT ANSWER

(3) 6ನೇ ಅಕ್ಟೋಬರ್, 1986


29.ಯಾವ ವಿಧದ ಸಂವಹನವು ಸಾರ್ವಜನಿಕ ಸಂಬಂಧ ಎಂದು ಕರೆಯಲ್ಪಟ್ಟಿದೆ ?
 (1)ಸಂವಹನದಾದ್ಯಂತ
 (2)ಆಂತರ್ ಸಂವಹನ
 (3)ಆಂತರಿಕ ಸಂವಹನ
 (4)ಬಾಹ್ಯ ಸಂವಹನ
CORRECT ANSWER

(4) ಬಾಹ್ಯ ಸಂವಹನ


30.ಭಾರತ ಸರ್ಕಾರದ ಎಲ್ಲ ಸಚಿವಾಲಯಗಳಲ್ಲಿ ಸಂಯೋಜಿತ ಹಣಕಾಸು ಸಲಹೆಗಾರ ಯೋಜನೆಯನ್ನು ಪರಿಚಯಿಸಿದ ವರ್ಷ
 (1)1974
 (2)1972
 (3)1976
 (4)1978
CORRECT ANSWER

(3) 1976


31.‘‘ಬ್ಯೂರೋಕ್ರೆಸಿ’’ ಎಂಬ ಪದವನ್ನು ಪ್ರಥಮವಾಗಿ ಬಳಸಿದವರು
 (1)ಮ್ಯಾಕ್ಸ್ ವೆಬರ್
 (2)ವಿನ್ಸೆಂಟ್ ಡಿ. ಗೋರ್ನೆ
 (3)ಎಲ್.ಡಿ. ವೈಟ್
 (4)ಎಫ್.ಡಬ್ಲ್ಯೂ. ಟೇಲರ್
CORRECT ANSWER

(2) ವಿನ್ಸೆಂಟ್ ಡಿ. ಗೋರ್ನೆ


32.‘ಒಂಬಡ್ಸ್‌ಮನ್‌’ ಮೊದಲು ಪ್ರಾರಂಭವಾದದ್ದು ಯಾವ ರಾಷ್ಟ್ರದಲ್ಲಿ ?
 (1)ಡೆನ್ಮಾರ್ಕ್
 (2)ಸ್ವೀಡನ್
 (3)ಹಾಲೆಂಡ್
 (4)ಜರ್ಮನಿ
CORRECT ANSWER

(2) ಸ್ವೀಡನ್


33.ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ ಎಲ್ಲಿ ಸ್ಥಾಪಿತವಾಗಿದೆ ?
 (1)ನವದೆಹಲಿ
 (2)ಡೆಹ್ರಾಡೂನ್
 (3)ಬೆಂಗಳೂರು
 (4)ಹೈದರಾಬಾದ್
CORRECT ANSWER

(4) ಹೈದರಾಬಾದ್


34.ಸೇವೆಗಳಿಗೆ ಭವಿಷ್ಯದ ಅಭ್ಯರ್ಥಿಗಳನ್ನು ಯಾವ ತರಬೇತಿ ಸಿದ್ಧಪಡಿಸುತ್ತದೆ ?
 (1)ಔಪಚಾರಿಕ ತರಬೇತಿ
 (2)ಅನೌಪಚಾರಿಕ ತರಬೇತಿ
 (3)ಪ್ರವೇಶಾನಂತರ ತರಬೇತಿ
 (4)ಪ್ರವೇಶಪೂರ್ವ ತರಬೇತಿ
CORRECT ANSWER

(1) ಔಪಚಾರಿಕ ತರಬೇತಿ
ಅಥವಾ
(4) ಪ್ರವೇಶಪೂರ್ವ ತರಬೇತಿ


35.ನಿಯೋಜಿತ ಶಾಸನದ ಮೇಲೆ ಯಾವುದರ ಮೂಲಕ ಸಂಸತ್ತು ನಿಯಂತ್ರಣ ಚಲಾಯಿಸುತ್ತದೆ
 (1)ಪ್ರಧಾನ ಮಂತ್ರಿ
 (2)ಸರ್ವೋಚ್ಚನ್ಯಾಯಾಲಯ
 (3)ಸಂಸತ್ತಿನ ಸಮಿತಿ
 (4)ಲೋಕಸಭೆ ಸ್ಪೀಕರ್
CORRECT ANSWER

(3) ಸಂಸತ್ತಿನ ಸಮಿತಿ


36.ರಾಜ್ಯಗಳ ನಡುವಿನ ವಿವಾದಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಇದರಡಿ ಬರುತ್ತವೆ
 (1)ಮೇಲ್ಮನವಿ ನ್ಯಾಯಾಂಗ ವ್ಯಾಪ್ತಿ
 (2)ಸಲಹಾ ನ್ಯಾಯಾಲಯದ ವ್ಯಾಪ್ತಿ
 (3)ಅಸಾಮಾನ್ಯ ನ್ಯಾಯಾಂಗದ ವ್ಯಾಪ್ತಿ
 (4)ಮೂಲ ನ್ಯಾಯಾಂಗ ವ್ಯಾಪ್ತಿ
CORRECT ANSWER

(4) ಮೂಲ ನ್ಯಾಯಾಂಗ ವ್ಯಾಪ್ತಿ


37.ಭಾರತದ ಸಂವಿಧಾನದಲ್ಲಿ ನಿಯಂತ್ರಕರು ಮತ್ತು ಮಹಾಲೇಖಪಾಲರು ಲೆಕ್ಕ ಪರಿಶೋಧನೆ ವರದಿಯನ್ನು ಕೇಂದ್ರಕ್ಕೆ ಸಂಬಂಧಿಸಿದಂತೆ ಯಾರಿಗೆ ಸಲ್ಲಿಸುತ್ತಾರೆ ?
 (1)ಪ್ರಧಾನ ಮಂತ್ರಿ
 (2)ಹಣಕಾಸು ಮಂತ್ರಿ
 (3)ರಾಷ್ಟ್ರಪತಿ
 (4)ರಕ್ಷಣಾ ಮಂತ್ರಿ
CORRECT ANSWER

(3) ರಾಷ್ಟ್ರಪತಿ


38.ಹೈದ್ರಾಬಾದ-ಕರ್ನಾಟಕ ಪ್ರಾಂತ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿರುವ ವರ್ಷ
 (1)2014
 (2)2013
 (3)2012
 (4)2011
CORRECT ANSWER

(2) 2013
ಅಥವಾ
(3) 2012


39.ಶೇಷಾಧಿಕಾರ ಎಂದರೆ
 (1)ಭಾರತದ ರಾಷ್ಟ್ರಪತಿಯಿಂದ ಚಲಾಯಿಸಲ್ಪಡುವ ಅಧಿಕಾರ
 (2)ಭಾರತದ ಪ್ರಧಾನಮಂತ್ರಿಯಿಂದ ಚಲಾಯಿಸಲ್ಪಡುವ ಅಧಿಕಾರ
 (3)ಕೇಂದ್ರಪಟ್ಟಿ, ರಾಜ್ಯಪಟ್ಟಿ ಮತ್ತು ಸಮವರ್ತಿ ಪಟ್ಟಿಯಲ್ಲಿ ಸೇರ್ಪಡೆಯಾಗದ ಅಧಿಕಾರ
 (4)ಯಾವುದೂ ಅಲ್ಲ
CORRECT ANSWER

(3) ಕೇಂದ್ರಪಟ್ಟಿ, ರಾಜ್ಯಪಟ್ಟಿ ಮತ್ತು ಸಮವರ್ತಿ ಪಟ್ಟಿಯಲ್ಲಿ ಸೇರ್ಪಡೆಯಾಗದ ಅಧಿಕಾರ


40.ಸಂವಿಧಾನದ ಯಾವ ವಿಧಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ರಚನೆಗೆ ಅವಕಾಶ ಮಾಡಿಕೊಟ್ಟಿದೆ ?
 (1)338ನೇ ವಿಧಿ
 (2)335ನೇ ವಿಧಿ
 (3)334ನೇ ವಿಧಿ
 (4)341ನೇ ವಿಧಿ
CORRECT ANSWER

(1) 338ನೇ ವಿಧಿ


41.ಇವರಲ್ಲಿ ಭಾರತದ ಸಂಚಿತ ನಿಧಿಯಿಂದ ವೇತನ ಪಡೆಯುವವರು ಯಾರು ?
 (1)ಪ್ರಧಾನಮಂತ್ರಿ
 (2)ಮುಖ್ಯಮಂತ್ರಿ
 (3)ರಾಜ್ಯಪಾಲರು
 (4)ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕ
CORRECT ANSWER

(4) ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕ


42.ಕೇಂದ್ರ ಸರ್ಕಾರ ಸಂಗ್ರಹಿಸಿದ ಒಟ್ಟು ತೆರಿಗೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಂಚಿಕೆ ಮಾಡುವ ವಿಷಯದಲ್ಲಿ ರಾಷ್ಟ್ರಪತಿಯವರಿಗೆ ಯಾರು ಶಿಫಾರಸ್ಸು ಮಾಡುತ್ತಾರೆ ?
 (1)ಯೋಜನಾ ಆಯೋಗ
 (2)ಹಣಕಾಸಿನ ಆಯೋಗ
 (3)ಭಾರತದ ಮಹಾಲೆಕ್ಕ ಪರಿಶೋಧಕ (ಕಂಪ್ಟ್ರೋಲರ್, ಮತ್ತು ಆಡಿಟರ್ ಜನರಲ್)
 (4)ಕೇಂದ್ರದ ಸರ್ಕಾರ
CORRECT ANSWER

(2) ಹಣಕಾಸಿನ ಆಯೋಗ


43.ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ ?
 (1)ವಿಧಿ 331
 (2)ವಿಧಿ 332
 (3)ವಿಧಿ 333
 (4)ವಿಧಿ 335
CORRECT ANSWER

(3) ವಿಧಿ 333


44.ಸಂವಿಧಾನದ ಯಾವ ತಿದ್ದುಪಡಿಯ ಪ್ರಕಾರ ಮತದಾನದ ವಯಸ್ಸನ್ನು 21 ವರ್ಷದಿಂದ 18 ವರ್ಷಗಳಿಗೆ ಇಳಿಸಲಾಯಿತು ?
 (1)59ನೆಯ ತಿದ್ದುಪಡಿ
 (2)60ನೆಯ ತಿದ್ದುಪಡಿ
 (3)61ನೆಯ ತಿದ್ದುಪಡಿ
 (4)62ನೆಯ ತಿದ್ದುಪಡಿ
CORRECT ANSWER

(3) 61ನೆಯ ತಿದ್ದುಪಡಿ


45.ಭಾರತೀಯ ಸಂವಿಧಾನದ 133ನೇ ವಿಧಿಯು ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದ ಮೇಲ್ಮನವಿಯ ವ್ಯಾಪ್ತಿಯೊಂದಿಗೆ ಈ ಕೆಳಗಿನ ವಿಷಯ ಕುರಿತಂತೆ ವ್ಯವಹರಿಸುತ್ತದೆ:
 A.ಸಿವಿಲ್ ವಿಷಯ ಮಾತ್ರ
 B.ನಾಗರಿಕ ಮತ್ತು ಕ್ರಿಮಿನಲ್ ವಿಷಯ ಎರಡೂ
 C.ಕ್ರಿಮಿನಲ್ ವಿಷಯ ಮಾತ್ರ
 D.ವಿಶೇಷ ಮನವಿಗಳು
 ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
 (1)A ಮಾತ್ರ
 (2)B ಮಾತ್ರ
 (3)A ಮತ್ತು D ಎರಡೂ
 (4)C ಮತ್ತು D ಎರಡೂ
CORRECT ANSWER

(1) A ಮಾತ್ರ


46.ಭಾರತದ ನಾಗರಿಕರ ಸಾಮೂಹಿಕ ಸಮಾಜವಾದಿ ಆರ್ಥಿಕ ಧ್ಯೇಯೋದ್ದೇಶಗಳನ್ನು ಇದರಲ್ಲಿ ಸೇರಿಸಲಾಗಿದೆ
 (1)ಮೂಲಭೂತ ಹಕ್ಕುಗಳು
 (2)ರಾಜ್ಯನೀತಿ ನಿರ್ದೇಶಕ ತತ್ವಗಳು
 (3)ಮೂಲಭೂತ ಕರ್ತವ್ಯಗಳು
 (4)ಸಂವಿಧಾನದ ಪ್ರಸ್ತಾವನೆ
CORRECT ANSWER

(2) ರಾಜ್ಯನೀತಿ ನಿರ್ದೇಶಕ ತತ್ವಗಳು


47.25 ವಿದ್ಯಾರ್ಥಿಗಳ ಸರಾಸರಿ ತೂಕ 16 ಕೆಜಿ. ಮೊದಲ 12 ವಿದ್ಯಾರ್ಥಿಗಳ ಸರಾಸರಿ ತೂಕ 14 ಕೆಜಿ ಮತ್ತು ಕೊನೆಯ 12 ವಿದ್ಯಾರ್ಥಿಗಳ ಸರಾಸರಿ ತೂಕ 17 ಕೆಜಿ. 13ನೇ ವಿದ್ಯಾರ್ಥಿಯ ತೂಕವನ್ನು ಕಂಡುಹಿಡಿಯಿರಿ
 (1)32 ಕೆಜಿ
 (2)24 ಕೆಜಿ
 (3)30 ಕೆಜಿ
 (4)28 ಕೆಜಿ
CORRECT ANSWER

(4) 28 ಕೆಜಿ


48.ಒಬ್ಬ ಮನುಷ್ಯ ತನ್ನ ಆದಾಯದ 30% ಆಹಾರಕ್ಕಾಗಿ, 12% ಮನೆ ಬಾಡಿಗೆಗೆ 28% ವಿವಿಧ ಮೇಲೆ ಖರ್ಚು ಮಾಡುತ್ತಾನೆ. ತಿಂಗಳ ಕೊನೆಯಲ್ಲಿ ಉಳಿತಾಯ ₹ 810 ಆಗಿದ್ದರೆ, ಆಗ ಮನುಷ್ಯನ ಒಟ್ಟು ಆದಾಯ
 (1)₹ 2,100
 (2)₹ 2,400
 (3)₹ 2,600
 (4)₹ 2,700
CORRECT ANSWER

(4) ₹ 2,700


49.A ಯ ಎತ್ತರವು B ಗಿಂತ 50% ಕಡಿಮೆಯಿದ್ದರೆ, B ಯ ಎತ್ತರವು A ಗಿಂತ ಎಷ್ಟು ಶೇಕಡಾ ಹೆಚ್ಚು?
 (1)100%
 (2)80%
 (3)150%
 (4)50%
CORRECT ANSWER

(1) 100%


50.ರೇಡಿಯೊವನ್ನು 10% ರಿಯಾಯಿತಿಯೊಂದಿಗೆ ₹ 500 ನಿವ್ವಳ ಬೆಲೆಯನ್ನು ₹ 423ಕ್ಕೆ ತರಲು ಗ್ರಾಹಕರಿಗೆ ಯಾವ ಹೆಚ್ಚುವರಿ ರಿಯಾಯಿತಿಯನ್ನು ನೀಡಬೇಕು ?
 (1)5%
 (2)6%
 (3)7%
 (4)10%
CORRECT ANSWER

(2) 6%


51.ಎಷ್ಟು ಕಿಲೋಗ್ರಾಂ ಅಕ್ಕಿ ಬೆಲೆ ರೂ. ಪ್ರತಿ ಕೆಜಿಗೆ 18 ರೂ. ಗೆ 30 ಕೆಜಿ ತೂಗುವ ಕೆಜಿಗೆ ರೂ. 14 ಬೆಲೆಯ ಮತ್ತೊಂದು ವಿಧದ ಅಕ್ಕಿಯೊಂದಿಗೆ ಮಿಶ್ರಣ ಮಾಡಬೇಕು, ಅದ್ದರಿಂದ ಪರಿಣಾಮವಾಗಿ ಮಿಶ್ರಣಕ್ಕೆ ರೂ. ಕೆಜಿಗೆ 15 ?
 (1)5 ಕೆಜಿ
 (2)10 ಕೆಜಿ
 (3)15 ಕೆಜಿ
 (4)20 ಕೆಜಿ
CORRECT ANSWER

(2) 10 ಕೆಜಿ


52.ಸೂಪರ್ ಮಾರ್ಕೆಟ್‌ನಲ್ಲಿರುವ ಉದ್ಯೋಗಿಗಳಲ್ಲಿ 3434 ಭಾಗವು ಕಾಲೇಜು ಪದವೀಧರರಲ್ಲದಿದ್ದರೆ, ಪದವೀಧರರಲ್ಲದವರಿಗೆ ಕಾಲೇಜು ಪದವೀಧರರ ಸಂಖ್ಯೆಯ ಅನುಪಾತ ಎಷ್ಟು?
 (1)1 : 4
 (2)3 : 1
 (3)1 : 3
 (4)3 : 4
CORRECT ANSWER

(3) 1 : 3


53.ನಾಲ್ಕು ವಿದ್ಯಾರ್ಥಿಗಳು ಕಾಲೇಜು ಚಿತ್ರಕ್ಕಾಗಿ ಪೋಟೋ ತೆಗೆಯಲು ಬೆಂಚ್ ಮೇಲೆ ಕುಳಿತಿದ್ದಾರೆ. ಸೋನಂ ರೀನಾಳ ಎಡಭಾಗದಲ್ಲಿದ್ದಾರೆ. ರೀನಾ ಅವರ ಬಲಕ್ಕೆ ಮಂಜು ಇದ್ದಾರೆ. ರೀಟಾ ರೀನಾ ಮತ್ತು ಮಂಜು ನಡುವೆ. ಪೋಟೋದಲ್ಲಿ ಎಡದಿಂದ ಎರಡನೆಯವರು ಯಾರು ?
 (1)ರೀಟಾ
 (2)ಮಂಜು
 (3)ಸೋನಮ್
 (4)ರೀನಾ
CORRECT ANSWER

(4) ರೀನಾ


54.ಒಬ್ಬ ಪುರುಷನನ್ನು ಪರಿಚಯಿಸುತ್ತಾ ಮಹಿಳೆಯೊಬ್ಬರು. ‘‘ಅವನು ನನ್ನ ತಾಯಿಯ ತಾಯಿಗೆ ಒಬ್ಬನೇ ಮಗ’’ ಎಂದಳು. ಮಹಿಳೆಯು ಪುರುಷನೊಂದಿಗೆ ಹೇಗೆ ಸಂಬಂಧ ಹೊಂದಿದ್ದಾಳೆ ?
 (1)ತಾಯಿ
 (2)ಚಿಕ್ಕಮ್ಮ
 (3)ಸೊಸೆ
 (4)ಸಹೋದರಿ
CORRECT ANSWER

(3) ಸೊಸೆ


55.ನೀವು ವಾಯುವ್ಯಕ್ಕೆ ಮುಖ ಮಾಡುತ್ತಿದ್ದೀರಿ ಎಂದು ಊಹಿಸಿಕೊಳ್ಳಿ. ನೀವು ಪ್ರದಕ್ಷಿಣಾಕಾರವಾಗಿ 90° ಅನ್ನು ತಿರುಗಿ, ನಂತರ ಪ್ರದಕ್ಷಿಣಾಕಾರವಾಗಿ 180° ಮತ್ತು ಅದೇ ದಿಕ್ಕಿನಲ್ಲಿ ಇನ್ನೊಂದು 90° ಅನ್ನು ತಿರುಗಿ, ನೀವು ಈಗ ಯಾವ ದಿಕ್ಕನ್ನು ಎದುರಿಸುತ್ತಿದ್ದೀರಿ ?
 (1)ಅಗ್ಲೇಯ
 (2)ವಾಯುವ್ಯ
 (3)ಪೂರ್ವ
 (4)ಪಶ್ಚಿಮ
CORRECT ANSWER

(1) ಅಗ್ಲೇಯ


56.ಗಡಿಯಾರದ ಸಮಯವು 12:35 ಆಗಿರುತ್ತದೆ, ಆಗ ಅದರ ಕನ್ನಡಿ ಚಿತ್ರವು
 (1)23:25
 (2)11:25
 (3)14:25
 (4)11:10
CORRECT ANSWER

(2) 11:25


57.ಅನಿಲ್ ಮನೆಯಿಂದ ಹೊರಟು ದಕ್ಷಿಣಕ್ಕೆ 10 ಕಿ.ಮೀ. ಸೈಕಲ್ ತುಳಿದು, ಬಲಕ್ಕೆ ತಿರುಗಿ 5 ಕಿ.ಮೀ. ಮತ್ತು ಬಲಕ್ಕೆ ತಿರುಗಿ 10 ಕಿ.ಮೀ. ಸೈಕಲ್ ತುಳಿದು ಎಡಕ್ಕೆ ತಿರುಗಿ 10 ಕಿ.ಮೀ. ಅವನು ನೇರವಾಗಿ ತನ್ನ ಮನೆಗೆ ತಲುಪಲು ಎಷ್ಟು ಕಿಲೋಮೀಟರ್ ಸೈಕಲ್ ಮಾಡಬೇಕು ?
 (1)30 ಕಿ.ಮೀ
 (2)45 ಕಿ.ಮೀ
 (3)10 ಕಿ.ಮೀ
 (4)15 ಕಿ.ಮೀ
CORRECT ANSWER

(4) 15 ಕಿ.ಮೀ


58.ಅನಿಲ್ ಮತ್ತು ಸುನೀಲ್ 31 ವಿದ್ಯಾರ್ಥಿಗಳ ತರಗತಿಯಲ್ಲಿ ಅಗ್ರಸ್ಥಾನದಿಂದ ಕ್ರಮವಾಗಿ ಏಳು ಮತ್ತು ಹತ್ತೊಂದನೇಯ ರ್ಯಾಂಕ್ ಪಡೆದಿದ್ದಾರೆ. ತರಗತಿಯಲ್ಲಿ ಕೆಳಗಿನಿಂದ ಅವರ ಆಯಾ ಶ್ರೇಣಿಗಳು ಯಾವುವು ?
 (1)20 ಮತ್ತು 20
 (2)24 ಮತ್ತು 20
 (3)25 ಮತ್ತು 21
 (4)26 ಮತ್ತು 22
CORRECT ANSWER

(3) 25 ಮತ್ತು 21


59.1, 2, 3, 4, 5, 6 ಅಂಕೆಗಳನ್ನು ಬಳಸಿಕೊಂಡು ಪುನರಾವರ್ತಿಸದೆ ಮೂರು ಅಂಕೆಗಳ ಸಂಖ್ಯೆಗಳನ್ನು ಎಷ್ಟು ವಿಧದಲ್ಲಿ ತಯಾರಿಸಬಹುದು ?
 (1)100
 (2)110
 (3)120
 (4)130
CORRECT ANSWER

(3) 120


60.ಯಾವ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ ?
 (1)29ನೇ ಸೆಪ್ಟೆಂಬರ್
 (2)14ನೇ ನವೆಂಬರ್
 (3)29ನೇ ಆಗಸ್ಟ್
 (4)29ನೇ ಜುಲೈ
CORRECT ANSWER

(3) 29ನೇ ಆಗಸ್ಟ್


61.ಭೀಮ್‌ರಾವ್‌ ಅಂಬೇಡ್ಕರ್ ಅಂತರ ರಾಷ್ಟ್ರೀಯ ಕ್ರೀಡಾಂಗಣ ಇರುವ ಸ್ಥಳ ?
 (1)ಫೈಜಾಬಾದ್
 (2)ಗಾಜಿಯಾಬಾದ್
 (3)ಪಾಟ್ನ
 (4)ಕಾನ್‌ಪುರ
CORRECT ANSWER

(1) ಫೈಜಾಬಾದ್


62.ಕರ್ನಾಟಕದಲ್ಲಿ ಇಲ್ಲದ ಜೈವಿಕ ತಂತ್ರಜ್ಞಾನ ಕಂಪನಿ
 (1)ಬಯೋಕಾನ್
 (2)ನೊವೊಜೈಮ್ಸ್
 (3)ಡಾ. ರೆಡ್ಡೀಸ್ ಲೆಬೊರಾಟ್ರೀಸ್
 (4)ಜೆ.ಇ. ಹೆಲ್ತ್‌ಕೆರ್‌
CORRECT ANSWER

(3) ಡಾ. ರೆಡ್ಡೀಸ್ ಲೆಬೊರಾಟ್ರೀಸ್


63.ಕರ್ನಾಟಕದ ಕಂದಾಯ ಇಲಾಖೆ ಬಿಡುಗಡೆ ಮಾಡಿರುವ ಮೊಬೈಲ್ ಅಪ್ಲಿಕೇಶನ್‌ಗಳನ್ನು ಆಯ್ಕೆಮಾಡಿ
 (1)ಆಪ್ತಮಿತ್ರ, ಸಂಪರ್ಕ ಟ್ರೇಸಿಂಗ್, ಭೂಮಿ, ಮೋಜಿನಿ, ನಾಡಕಚೇರಿ
 (2)ಆಪ್ತಮಿತ್ರ, ಕಾಂಟ್ಯಾಕ್ಟ್ ಟ್ರೇಸಿಂಗ್, ಭೂಮಿ, ಮೋಜಿನಿ, ಕೆ-ಕಿಸಾನ್
 (3)ಆಪ್ತಮಿತ್ರ, ಸಂಪರ್ಕ ಟ್ರೇಸಿಂಗ್, ಭೂಮಿ, ಕೆ-ಕಿಸಾನ್, ಗೇಟ್ ಎಂಟ್ರಿ
 (4)ಆಪ್ತಮಿತ್ರ, ಮೊಬೈಲ್ ಒನ್, ಭೂಮಿ, ಮೋಜಿನಿ, ನಾಡಕಚೇರಿ
CORRECT ANSWER

(1) ಆಪ್ತಮಿತ್ರ, ಸಂಪರ್ಕ ಟ್ರೇಸಿಂಗ್, ಭೂಮಿ, ಮೋಜಿನಿ, ನಾಡಕಚೇರಿ


64.ಬಿಟಿ-ಹತ್ತಿ ಮತ್ತು ಬಿಟಿ-ಬದನೆಯಲ್ಲಿ ಬಿಟಿಯ ಅರ್ಥವೇನು ?
 (1)ಬ್ಯಾಸಿಲಸ್ ಥರ್ಮೋಫಿಲಸ್
 (2)ಬ್ಯಾಸಿಲಸ್ ತುರಿಂಜಿಯೆನ್ಸಿಸ್
 (3)ಬೋರ್ಡೆಟೆಲ್ಲಾಟೊಮಾಟಮ್
 (4)ಬ್ಯಾಸಿಲಸ್ ಥರ್ಮೋಲಾಕ್ಟಿಸ್
CORRECT ANSWER

(2) ಬ್ಯಾಸಿಲಸ್ ತುರಿಂಜಿಯೆನ್ಸಿಸ್


65.ಮೊದಲ ಬಾರಿಗೆ ಯಾವ ಮಾನವ ಪ್ರೋಟೀನ್ ಅನ್ನು ಮರು ಸಂಯೋಜಿತ ಬ್ಯಾಕ್ಟೀರಿಯಾದಲ್ಲಿ ಯಶಸ್ವಿಯಾಗಿ ಉತ್ಪಾದಿಸಲಾಯಿತು ?
 (1)ಸೊಮಾಟ್ರೋಪಿನ್
 (2)ಫ್ಯಾಕ್ಟರ್ VIII
 (3)ಇಂಟರ್ಫೆರಾನ್ ಅಲ್ಫಾ 2 ಬಿ
 (4)ಇನ್ಸುಲಿನ್
CORRECT ANSWER

(4) ಇನ್ಸುಲಿನ್


66.ಸಸ್ಯ ಅಂಗಾಂಶ ಕೃಷಿಯಲ್ಲಿ ಸಾಮಾನ್ಯವಾಗಿ ಸಸ್ಯದ ಯಾವ ಭಾಗವನ್ನು ವೈರಸ್ ಮುಕ್ತ ಸಸ್ಯ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತದೆ ?
 (1)ಬೇರುಗಳು
 (2)ಮೇರಿಸ್ಟಮ್
 (3)ಎಲೆಗಳು
 (4)ಬೀಜಗಳು
CORRECT ANSWER

(2) ಮೇರಿಸ್ಟಮ್


67.7,000 ಏಕದಿನ ರನ್ ಪೂರೈಸಿದ ಮೊದಲ ಮಹಿಳಾ ಕ್ರಿಕೆಟರ್ ಯಾರು ?
 (1)ಸ್ಮೃತಿ ಮಂದಾನ
 (2)ಮಿಥಾಲಿ ರಾಜ್
 (3)ಹರ್ಮನ್‌ಪ್ರೀತ್‌ ಕೌರ್
 (4)ಜೂಲನ್ ಗೋಸ್ವಾಮಿ
CORRECT ANSWER

(2) ಮಿಥಾಲಿ ರಾಜ್


68.ಯಾವ ಕ್ರೀಡೆಯಲ್ಲಿ ಮೀರಾಬಾಯಿ ಜಾನು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಮೊದಲ ಪದಕವನ್ನು ಪಡೆದರು ?
 (1)ಸ್ಟ್ರಿಂಟ್
 (2)ವೇಟ್‌ಲಿಫ್ಟಿಂಗ್
 (3)ಬಾಕ್ಸಿಂಗ್
 (4)ಕುಸ್ತಿ
CORRECT ANSWER

(2) ವೇಟ್‌ಲಿಫ್ಟಿಂಗ್


69.ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಮೂರನೇ ಭಾರತೀಯ ಬಾಕ್ಸರ್ ಯಾರು ?
 (1)ವಿಜೇಂದರ್ ಸಿಂಗ್
 (2)ಸಿಮ್ರಂಜಿತ್ ಕೌರ್
 (3)ಮನೀಶ್ ಕೌಶಿಕ್
 (4)ಲವ್ಲಿನಾ ಬೊರ್ಗೊಹೈನ್
CORRECT ANSWER

(4) ಲವ್ಲಿನಾ ಬೊರ್ಗೊಹೈನ್


70.ಕರ್ನಾಟಕದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಯಾವ ನಗರದಲ್ಲಿದೆ ?
 (1)ಬೆಳಗಾವಿ
 (2)ವಿಜಯಪುರ
 (3)ಬೆಂಗಳೂರು
 (4)ಮೈಸೂರು
CORRECT ANSWER

(3) ಬೆಂಗಳೂರು


71.ಭಾರತದ ಯಾವ ಪ್ರಾಣಿ (species) ಪ್ರಭೇದದ ಸಂಖ್ಯೆಯಲ್ಲಿ 25% ಕರ್ನಾಟಕದಲ್ಲಿ ಕಂಡುಬರುತ್ತದೆ ?
 (1)ಹುಲಿ
 (2)ಜಿಂಕೆ
 (3)ಸಿಂಹ
 (4)ಆನೆ
CORRECT ANSWER

(4) ಆನೆ


72.ಕರ್ನಾಟಕದಲ್ಲಿ ಸಹಕಾರ ಚಳುವಳಿ ಪ್ರಾರಂಭವಾದ ವರ್ಷ
 (1)1906
 (2)1905
 (3)1910
 (4)1936
CORRECT ANSWER

(2) 1905


73.ಕರ್ನಾಟಕದಲ್ಲಿ ರಚಿಸಿಲಾದ 1ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರು ?
 (1)ಸಿ.ಜೆ. ಚಿನ್ನಸ್ವಾಮಿ
 (2)ಡಾ. ಜಿ. ತಿಮ್ಮಯ್ಯ
 (3)ಕೆ.ಪಿ. ಸುರೇಂದ್ರನಾಥ್
 (4)ಎ.ಜಿ. ಕೊಡ್ಗಿ
CORRECT ANSWER

(2) ಡಾ. ಜಿ. ತಿಮ್ಮಯ್ಯ


74.ಮೈಸೂರು ಪ್ರಾವಿಜನಲ್ ಕೋ ಆಪರೇಟಿವ್ ಬ್ಯಾಂಕನ್ನು ಕೇಂದ್ರ ಬ್ಯಾಂಕಾಗಿ ಪರಿವರ್ತಿಸಲು ಯಾವ ಸಮಿತಿಯು ಶಿಫಾರಸು ಮಾಡಿತು ?
 (1)ಲಲ್ಲೂಭಾಯಿ ಸಮಲ್ಡಾಸ್ ಸಮೀತಿ
 (2)ಅಶೋಕ ಮೆಹ್ತ ಸಮಿತಿ
 (3)ಬಲವಂತರಾಯ್ ಮೆಹ್ತ ಸಮಿತಿ
 (4)ಕೆಂಡೂಲ್ಕರ ಸಮಿತಿ
CORRECT ANSWER

(1) ಲಲ್ಲೂಭಾಯಿ ಸಮಲ್ಡಾಸ್ ಸಮೀತಿ


75.ಯಾವುದು ಭಾರತದ ಎರಡನೇ ಅತಿದೊಡ್ಡ ಹಾಲು ಸರಕಾರ ಸಂಘವಾಗಿದೆ ?
 (1)ಅಮೂಲ್
 (2)ಕೆ.ಎಮ್.ಎಫ್.
 (3)ಐ.ಎಫ್.ಎಫ್.ಸಿ.ಓ.
 (4)ಕೆ.ಸಿ.ಎಮ್.ಎಮ್.ಎಫ್.
CORRECT ANSWER

(2) ಕೆ.ಎಮ್.ಎಫ್.


76.ಕರ್ನಾಟಕದಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರ ವಸತಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ನೋಡಲ್ (ಸಂಧಿ) ಸಂಸ್ಥೆ ಯಾವುದು ?
 (1)ಮಹಾತ್ಮಗಾಂಧೀ ಗ್ರಾಮೀಣ ವಸತಿ ನಿಗಮ
 (2)ರಾಜೀವ ಗಾಂಧೀ ಗ್ರಾಮೀಣ ವಸತಿ ನಿಗಮ
 (3)ಇಂದಿರಾ ಗಾಂಧೀ ಗ್ರಾಮೀಣ ವಸತಿ ನಿಗಮ
 (4)ಕರ್ನಾಟಕ ಗೃಹ (ವಸತಿ) ಮಂಡಳಿ
CORRECT ANSWER

(2) ರಾಜೀವ ಗಾಂಧೀ ಗ್ರಾಮೀಣ ವಸತಿ ನಿಗಮ


77.ಕರ್ನಾಟಕದ ಮೊದಲ ಸಹಕಾರ ಸಂಘ ಯಾವುದು ?
 (1)ಶಿರಹಟ್ಟಿ
 (2)ಮುಂಡರಗಿ
 (3)ಕಣಗಿನಹಾಳ
 (4)ನರಗುಂದ
CORRECT ANSWER

(3) ಕಣಗಿನಹಾಳ


78.ಕೊಂಡಜ್ಜಿ ಬಸಪ್ಪರವರ ಅಧ್ಯಕ್ಷತೆಯಲ್ಲಿ ರಚಿಸಿದ ಪಂಚಾಯತ್ ರಾಜ್ ಸಮಿತಿಯ ಶಿಫಾರಸು ಇದಾಗಿದೆ
 (1)ವಿಕೇಂದ್ರಿಕರಣದ ಅಭಿವೃದ್ಧಿ ಮಂಡಳಿಗಳು
 (2)ತಾಲ್ಲೂಕಿಗೆ ಹೆಚ್ಚಿನ ಅಧಿಕಾರ ಒದಗಿಸಿತು
 (3)ಗ್ರಾಮ್ ಪಂಚಾಯತ್ ಸಂಬಂಧಿಸಿದ ವಿಚಾರದಿಂದ ಸಂಸದರು ಮತ್ತು ಶಾಸಕರನ್ನು ಹೊರಗಿಡಲಾಯಿತು
 (4)ಮೇಲಿನ ಎಲ್ಲವೂ
CORRECT ANSWER

(4) ಮೇಲಿನ ಎಲ್ಲವೂ


79.ವಿಕಲಚೇತನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸದೃಡಗೊಳಿಸುವ ಉದ್ದೇಶದಿಂದ ಅವರಿಗಾಗಿಯೇ ಹೊಸ ಸಹಕಾರಿ ಸಂಘವನ್ನು ಸ್ಥಾಪಿಸುವ ಯೋಜನೆ ಯಾವುದಾಗಿದೆ ?
 (1)ಆಶಾಕಿರಣ ಯೋಜನೆ
 (2)ಪ್ರಿಯದರ್ಶಿನಿ ಯೋಜನೆ
 (3)ಆಧಾರ ಯೋಜನೆ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಆಶಾಕಿರಣ ಯೋಜನೆ


80.ರಾಜ್ಯಕೋಶ ನೀತಿಯಲ್ಲಿ ಕಂಡುಬರುವ ಪ್ರಮುಖ ಅಂಶಗಳು
 (1)ತೆರಿಗೆ, ಸಾರ್ವಜನಿಕ ವೆಚ್ಚ, ಸಾರ್ವಜನಿಕ ಸಾಲ
 (2)ಸಾರ್ವಜನಿಕ ಹೂಡಿಕೆ, ಸಾರ್ವಜನಿಕ ಉಳಿತಾಯ, ಸಾರ್ವಜನಿಕ ಬಡ್ಡಿ
 (3)ವಿದೇಶೀ ಆದಾಯ, ವಿದೇಶೀ ಹೂಡಿಕೆ, ವಿದೇಶೀ ಸಾಲ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ತೆರಿಗೆ, ಸಾರ್ವಜನಿಕ ವೆಚ್ಚ, ಸಾರ್ವಜನಿಕ ಸಾಲ


81.ಭಾರತದಲ್ಲಿ ಯಾವ ಸಚಿವಾಲಯವು ಇತ್ತಿಚೆಗೆ (ಅಕ್ಟೋಬರ್, 2021) ‘ಸಂಭವ’ ಎನ್ನುವ ಹೆಸರಿನ ಇ-ರಾಷ್ಟ್ರೀಯ ಮಟ್ಟದ ಜಾಗೃತಿ ಕಾರ್ಯಕ್ರಮ ಪ್ರಾರಂಭಿಸಿತು ?
 (1)ಹಣಕಾಸು ಸಚಿವಾಲಯ
 (2)ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME)
 (3)ಸಂಸದೀಯ ವ್ಯವಹಾರಗಳ ಸಚಿವಾಲಯ
 (4)ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
CORRECT ANSWER

(2) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME)


82.ಅಕ್ಟೋಬರ್ 16, 2020 ರಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಒಟ್ಟು ಸದಸ್ಯತ್ವ
 (1)189 ದೇಶಗಳು
 (2)191 ದೇಶಗಳು
 (3)190 ದೇಶಗಳು
 (4)192 ದೇಶಗಳು
CORRECT ANSWER

(3) 190 ದೇಶಗಳು


83.2020 – 2021 ರ ಆರ್ಥಿಕ ಸಮೀಕ್ಷೆಯ ವಿಷಯ ಯಾವುದು ?
 (1)COVID-19 ವಿರುದ್ಧ ಹೋರಾಟ
 (2)ಆರೋಗ್ಯ ಮತ್ತು ಸ್ವಾಸ್ಥ್ಯ
 (3)ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು
 (4)ಜೀವಗಳು ಮತ್ತು ಜೀವನೋಪಾಯಗಳನ್ನು ಉಳಿಸುವುದು
CORRECT ANSWER

(4) ಜೀವಗಳು ಮತ್ತು ಜೀವನೋಪಾಯಗಳನ್ನು ಉಳಿಸುವುದು


84.COVID-19 ಬಿಕ್ಕಟ್ಟಿನ ಹೊರತಾಗಿಯೂ, ಯಾವ ವಲಯವು ಬೆಳ್ಳಿಯ ರೇಖೆಯಾಗಿ ಉಳಿದಿದೆ ?
 (1)ಸೇವಾ ವಲಯ
 (2)ಕೃಷಿ ಕ್ಷೇತ್ರ
 (3)ಉತ್ಪಾದನಾ ವಲಯ
 (4)ನಿರ್ಮಾಣ ಕ್ಷೇತ್ರ
CORRECT ANSWER

(2) ಕೃಷಿ ಕ್ಷೇತ್ರ


85.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಪರಿಶೀಲನಾ ಸಮಿತಿಯ ವರದಿಯು 2023 ರ ವೇಳೆಗೆ ಸಾಮಾನ್ಯ (ಸಂಯೋಜಿತ) ಸರ್ಕಾರಕ್ಕೆ 60% ರ GDP ಅನುಪಾತಕ್ಕೆ ಸಾಲವನ್ನು ಶಿಫಾರಸು ಮಾಡಿದೆ, ಇದು ಕೇಂದ್ರ ಸರ್ಕಾರಕ್ಕೆ 40% ಮತ್ತು ರಾಜ್ಯ ಸರ್ಕಾರಕ್ಕೆ 20% ಒಳಗೊಂಡಿದೆ.
 B.ರಾಜ್ಯ ಸರ್ಕಾರದ ಜಿ.ಡಿ.ಪಿ.ಯ 49% ಕ್ಕೆ ಹೋಲಿಸಿದರೆ ಕೇಂದ್ರ ಸರ್ಕಾರವು ಜಿ.ಡಿ.ಪಿ.ಯ 21% ನಷ್ಟು ದೇಶೀಯ ಹೊಣೆಗಾರಿಕೆಗಳನ್ನು ಹೊಂದಿದೆ.
 C.ಭಾರತದ ಸಂವಿಧಾನದ ಪ್ರಕಾರ, ರಾಜ್ಯವು ಯಾವುದೇ ಸಾಲವನ್ನು ಸಂಗ್ರಹಿಸಲು ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ, ರಾಜ್ಯವು ಕೇಂದ್ರಕ್ಕೆ ಸಲ್ಲಿಸಬೇಕಾದ ಬಾಕಿ ಉಳಿಸಿಕೊಂಡಿದ್ದರೆ.
 ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
 (1)A ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು C ಮಾತ್ರ
 (4)A, B ಮತ್ತು C
CORRECT ANSWER

(3) A ಮತ್ತು C ಮಾತ್ರ


86.ಇತ್ತೀಚೆಗೆ ಸುದ್ದಿಯಲ್ಲಿರುವ, ಸುದರ್ಶನ್ ಸೇನ್ ಸಮಿತಿಯು ___________ ಕ್ಕೆ ಸಂಬಂಧಿಸಿದೆ
 (1)ರೈತರ ಆದಾಯವನ್ನು ದ್ವಿಗುಣಗೊಳಿಸುವುದು
 (2)ಜೀವವೈವಿಧ್ಯ ಸಂರಕ್ಷಣೆ
 (3)ಆಸ್ತಿ ಪುನರ್‌ನಿರ್ಮಾಣ ಕಂಪನಿಗಳು (ARCs)
 (4)ವಿಶೇಷ ಆರ್ಥಿಕ ವಲಯಗಳು
CORRECT ANSWER

(3) ಆಸ್ತಿ ಪುನರ್‌ನಿರ್ಮಾಣ ಕಂಪನಿಗಳು (ARCs)


87.ಮಾನವ ಅಭಿವೃದ್ಧಿ ಸೂಚ್ಯಂಕ 2020 ರ ಪ್ರಕಾರ, 189 ರಾಷ್ಟ್ರಗಳಲ್ಲಿ ಭಾರತದ ರ್ಯಾಂಕಿಂಗ್
 (1)129
 (2)131
 (3)136
 (4)139
CORRECT ANSWER

(2) 131


88.ಈಗಿನ ನೀತಿ ಆಯೋಗದ ಉಪಾಧ್ಯಕ್ಷರು
 (1)ಅಮಿತಾಬ್ ಕಾಂತ್
 (2)ನರೇಂದ್ರ ಮೋದಿ
 (3)ಅರವಿಂದ ಸುಬ್ರಮಣ್ಯನ್
 (4)ರಾಜೀವ್ ಕುಮಾರ್
CORRECT ANSWER

(4) ರಾಜೀವ್ ಕುಮಾರ್


89.ಜಾಗತಿಕ ಸಂತೋಷ ವರದಿ 2021 ರ ಪ್ರಕಾರ ಕಡಿಮೆ ಸಂತೋಷದ ರಾಷ್ಟ್ರ
 (1)ಫಿನ್‌ಲ್ಯಾಂಡ್‌
 (2)ಲಕ್ಸೆಂಬರ್ಗ್
 (3)ಆಫ್‌ಘಾನಿಸ್ಥಾನ
 (4)ಪಾಕಿಸ್ತಾನ
CORRECT ANSWER

(3) ಆಫ್‌ಘಾನಿಸ್ಥಾನ


90.2021 – 22 ರ ಕೇಂದ್ರ ಬಜೆಟ್ ಪ್ರಕಾರ, ಭಾರತದಲ್ಲಿ ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯ ಪಾಲು
 (1)ಶೇಕಡಾ 74
 (2)ಶೇಕಡಾ 82
 (3)ಶೇಕಡಾ 78
 (4)ಶೇಕಡಾ 81
CORRECT ANSWER

(1) ಶೇಕಡಾ 74


91.‘ಕಾರ್ಯಾಚರಣೆ ಹಸಿರು’ (Operation Green) ಸಂಬಂಧಿಸಿದ್ದು:
 (1)ಪರಿಸರ ಮಾಲಿನ್ಯ ನಿಯಂತ್ರಣ
 (2)ಹಸಿರು ಗೊಬ್ಬರ
 (3)ಅರಣ್ಯೀಕರಣ
 (4)ತೋಟಗಾರಿಗೆ ಬೆಳೆಗಳಿಗೆ ಉತ್ತಮ ಲಾಭದಾಯಕ ಬೆಲೆ
CORRECT ANSWER

(4) ತೋಟಗಾರಿಗೆ ಬೆಳೆಗಳಿಗೆ ಉತ್ತಮ ಲಾಭದಾಯಕ ಬೆಲೆ


92.ಕೆಳಗಿನವುಗಳಲ್ಲಿ ಯಾವುದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ 2.0 ರ ಅಂಶವಲ್ಲ?
 (1)ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆ
 (2)ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಊಟದ ಯೋಜನೆ
 (3)ಸ್ವ-ಸಹಾಯ ಗುಂಪು ಉತ್ಪಾದನೆ ಆಧಾರಿತ ಚಟುವಟಿಕೆಗಳು
 (4)ಪ್ರಧಾನ ಮಂತ್ರಿ ಇ-ವಿದ್ಯಾ
CORRECT ANSWER

(4) ಪ್ರಧಾನ ಮಂತ್ರಿ ಇ-ವಿದ್ಯಾ


93.ಯಾವ ರಾಜ್ಯದ ರಸ್ತೆ ಸಾರಿಗೆ ನಿಗಮವು ’ಅವತಾರ್’ ಯೋಜನೆಯನ್ನು ಜಾರಿಗೊಳಿಸಿದೆ ?
 (1)ಆಂಧ್ರ ಪ್ರದೇಶ
 (2)ಕರ್ನಾಟಕ
 (3)ತಮಿಳು ನಾಡು
 (4)ಮಹಾರಾಷ್ಟ್ರ
CORRECT ANSWER

(2) ಕರ್ನಾಟಕ


94.ಕರ್ನಾಟಕ ರಾಜ್ಯವು ಯಾವ ಋತುಗಳಲ್ಲಿ ಹೆಚ್ಚಿನ ಮಳೆಯನ್ನು ಪಡೆಯುತ್ತದೆ ?
 (1)ಮಾನ್ಸುನ್ ಮಾರುತಗಳ ನಿರ್ಗಮನ ಕಾಲ
 (2)ಬೇಸಿಗೆ ಕಾಲ
 (3)ಚಳಿಗಾಲ ಮತ್ತು ಬೇಸಿಗೆಕಾಲ
 (4)ನೈರುತ್ಯ ಮಾನ್ಸುನ್ ಮಾರುತಗಳ ಕಾಲ
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


95.ಕರ್ನಾಟಕ ರಾಜ್ಯದ ಈ ಕೆಳಗಿನವುಗಳಲ್ಲಿ ಯಾವ ನದಿ ವ್ಯವಸ್ಥೆಯು ಹೆಚ್ಚಿನ ಜಲಾಯನ ಕ್ಷೇತ್ರವನ್ನು ಹೊಂದಿದೆ ?
 (1)ತುಂಗಭದ್ರಾ ನದಿ ವ್ಯವಸ್ಥೆ
 (2)ಕಾವೇರಿ ನದಿ ವ್ಯವಸ್ಥೆ
 (3)ಕೃಷ್ಣಾನದಿ ವ್ಯವಸ್ಥೆ
 (4)ಘಟಪ್ರಭಾ ನದಿ ವ್ಯವಸ್ಥೆ
CORRECT ANSWER

(3) ಕೃಷ್ಣಾನದಿ ವ್ಯವಸ್ಥೆ


96.ಕರ್ನಾಟಕದ ಯಾವ ವಿಧದ ಮಣ್ಣು ಹೆಚ್ಚು ಪ್ರದೇಶವನ್ನು ಹೊಂದಿದೆ ? :
 (1)ಮರಳು ಮಿಶ್ರಿತ ಕೆಂಪು ಮಣ್ಣು
 (2)ಕೆಂಪು ಮಣ್ಣು
 (3)ಮೆಕ್ಕಲು ಮಣ್ಣು
 (4)ಕಪ್ಪು ಮಣ್ಣು
CORRECT ANSWER

(2) ಕೆಂಪು ಮಣ್ಣು


97.ಕರ್ನಾಟಕ ರಾಜ್ಯದ ಯಾವ ಭಾಗದಲ್ಲಿ ಶುಷ್ಕ ಎಲೆಯುದುರಿಸುವ ಮರಗಳು ಕಂಡು ಬರುತ್ತವೆ?
 (1)ಪಶ್ಚಿಮ ಘಟ್ಟಗಳಲ್ಲಿ
 (2)ರಾಜ್ಯದ ದಕ್ಷಿಣ ಮತ್ತು ದಕ್ಷಿಣದ ಪೂರ್ವ ಭಾಗದಲ್ಲಿ
 (3)ರಾಜ್ಯದ ಉತ್ತರದ ಭಾಗದಲ್ಲಿ
 (4)ರಾಜ್ಯದ ಪಶ್ಚಿಮ ಭಾಗದಲ್ಲಿ
CORRECT ANSWER

(2) ರಾಜ್ಯದ ದಕ್ಷಿಣ ಮತ್ತು ದಕ್ಷಿಣದ ಪೂರ್ವ ಭಾಗದಲ್ಲಿ


98.ಕರ್ನಾಟಕ ರಾಜ್ಯದ ಯಾವ ಜಿಲ್ಲೆಗಳಲ್ಲಿ ಹೆಚ್ಚಿನ ಸಾಂಪ್ರದಾಯಕ ಬಾವಿ ನೀರಾವರಿಯನ್ನು ಹೊಂದಿದೆ ?
 (1)ದಕ್ಷಣ ಕನ್ನಡ
 (2)ಬೆಳಗಾವಿ
 (3)ವಿಜಯಪುರ
 (4)ಬೀದರ
CORRECT ANSWER

(2) ಬೆಳಗಾವಿ


99.ರಾಜ್ಯದ ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ಎಮ್.ಎ.ಡಿ.ಬಿ.) ಯನ್ನು ಯಾವ ವರ್ಷದಲ್ಲಿ ಆರಂಭಿಸಲಾಯಿತು ?
 (1)1981
 (2)1991
 (3)2007
 (4)1995
CORRECT ANSWER

(2) 1991


100.ರಾಜ್ಯದಲ್ಲಿ ಈ ಕೆಳಗಿನ ಯಾವ ನದಿಗಳು ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತವೆ ?
 (1)ತುಂಗಾ-ಪೆನ್ನಾರ-ಕಬಿಣಿ
 (2)ಭೀಮಾ-ತುಂಗಾ-ಬೇಡ್ತಿ
 (3)ಕಾಳಿ-ಬೇಡ್ತಿ-ಶರಾವತಿ
 (4)ಭೀಮಾ-ಮಂಜರಾ-ಅರ್ಕಾವತಿ
CORRECT ANSWER

(3) ಕಾಳಿ-ಬೇಡ್ತಿ-ಶರಾವತಿ


   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment